ಲಕ್ನೋ: ಬಾಲ ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ತರಬೇತಿ ನೀಡುವ ಮಹತ್ವದ ಕಾರ್ಯಕ್ಕೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಗುರುತಿಸಲಾಗಿರುವ ಬಾಲ ಕಾರ್ಮಿಕರಿಗೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ನಿರ್ದೇಶನದಂತೆ ವಿಶೇಷ ತರಬೇತಿಯನ್ನು ನೀಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಕ್ನೋ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ಇಲಾಖೆಯು 110 ಮುನ್ಸಿಪಲ್ ವಾರ್ಡ್ ಮತ್ತು ನಗರ ಪ್ರದೇಶಗಳಲ್ಲಿ, 20 ವಾರ್ಡ್ ಮತ್ತು ನಗರ ಪಂಚಾಯತ್ಗಳಲ್ಲಿ ಸಮೀಕ್ಷೆ ನಡೆಸಿ ಬಾಲ ಕಾರ್ಮಿಕರನ್ನು ಗುರುತಿಸಿದೆ.
14 ವರ್ಷದ ಕೆಳಗಿನ ಒಟ್ಟು 6,005 ಬಾಲ ಕಾರ್ಮಿಕರನ್ನು ಗುರುತಿಸಲಾಗಿದೆ. ಇದರಲ್ಲಿ 5,180 ಮಕ್ಕಳು 9ರಿಂದ 14 ವಯಸ್ಸಿನವರು, 825 ಮಕ್ಕಳು 6ರಿಂದ 8 ವಯಸ್ಸಿನವರಾಗಿದ್ದಾರೆ.
ಮನೆ, ಅಂಗಡಿ, ಕಟ್ಟಡ ನಿರ್ಮಾಣಗಳಲ್ಲಿ ಇವರು ದುಡಿಯುತ್ತಿದ್ದರು. ಇದೀಗ ಅವರಿಗೆ ಸರಿಯಾದ ತರಬೇತಿಯನ್ನು ನೀಡಿ ಆರೋಗ್ಯಪೂರ್ಣರಾಗಿ, ಉತ್ತಮ ಬದುಕನ್ನು ಸಾಗಿಸಿ, ಸ್ವತಂತ್ರವಾಗಿ ಬದುಕಲು ಬೇಕಾದ ಉದ್ಯೋಗ ಮಾಡುವಂತೆ ಸಜ್ಜುಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.