ಲಕ್ನೋ: ಸಾಧುಗಳ, ಅರ್ಚಕರ ಟ್ರೇಡ್ಮಾರ್ಕ್ ಆಗಿದ್ದ ಕೇಸರಿ ಬಣ್ಣ ಇದೀಗ ಯುವಕರನ್ನೂ ಆಕರ್ಷಿಸುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ದಿಗ್ವಿಜಯ ಸಾಧಿಸಿ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ಬಳಿಕ ಅಲ್ಲಿನ ಯುವ ಜನತೆಯಂತು ಕೇಸರಿಯತ್ತ ಹೆಚ್ಚು ಹೆಚ್ಚು ಆಕರ್ಷಿತಗೊಳ್ಳುತ್ತಿದೆ.
ರಾಜ್ಯವನ್ನು ಕೇಸರಿಮಯಗೊಳಿಸುವ ಪ್ರಕ್ರಿಯೆಯನ್ನು ಅಲ್ಲಿನ ಯುವಕರು ಆರಂಭಿಸಿದಂತಿದೆ. ಬಿಜೆಪಿ ಕೇಂದ್ರ ಕಛೇರಿ ಸಂಪೂರ್ಣ ಕೇಸರಿಮಯವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಇದೀಗ ಕಾಲೇಜು ವಿದ್ಯಾರ್ಥಿಗಳೂ ಕೇಸರಿ ಧಿರಿಸು, ಕೇಸರಿ ಶಾಲುಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಕೇಸರಿ ಬಣ್ಣ ಇಂದಿನ ಟ್ರೆಂಡ್ ಆಗಿದ್ದು, ಪ್ರತಿ ಎರಡನೇ ವ್ಯಕ್ತಿ ಕೇಸರಿ ಬಟ್ಟೆ ಖರೀದಿಸುತ್ತಾನೆ ಎಂದು ಲಕ್ನೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಸುಯಶ್ ತ್ರಿಪಾಠಿ ಹೇಳುತ್ತಾರೆ.
ಕೇಸರಿ ಟೀ ಶರ್ಟ್, ಸನ್ಗ್ಲಾಸ್, ಕ್ಯಾಪ್, ಸನ್ಗ್ಲಾಸ್, ಸ್ಕಾರ್ಫ್ಗಳು ಅತೀ ಹೆಚ್ಚು ಬಳಕೆಯಾಗುತ್ತಿವೆ.
ಮೊದಲು ಬಿಸಿಲಿಗೆ ಉತ್ತಮ ಎಂದು ಪರಿಗಣಿಸಲಾದ ಬಿಳಿ ಬಣ್ಣವನ್ನು ಎಲ್ಲರೂ ಬಳಸುತ್ತಿದ್ದರು, ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ಕೇಸರಿ ಬಣ್ಣವನ್ನೇ ಹೆಚ್ಚಿನವರು ನೆಚ್ಚಿಕೊಳ್ಳುತ್ತಿದ್ದಾರೆ ಎಂದು ಫ್ಯಾಶನ್ ಡಿಸೈನರ್ ಮನೀಶ್ ತ್ರಿಪಾಠಿ ಹೇಳುತ್ತಾರೆ.
ಒಟ್ಟಿನಲ್ಲಿ ಯೋಗಿ ಅವರು ತೊಡುವ ಕೇಸರಿ ಉತ್ತರಪ್ರದೇಶ ಯುವಕರ ಸ್ಟೈಲನ್ನೇ ಬದಲಾಯಿಸಿದ್ದು, ಸಂಪೂರ್ಣ ಕೇಸರಿಮಯಗೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.