ತಿರುವನಂತಪುರಂ: ಕಮ್ಯೂನಿಸ್ಟ್ ಗೂಂಡಾಗಳಿಂದ ಹತರಾದ ಕೇರಳದ ಆರ್ಎಸ್ಎಸ್ ಕಾರ್ಯಕರ್ತರೊಬ್ಬರ ಪುತ್ರಿ ಫೇಸ್ಬುಕ್ನಲ್ಲಿ ತನ್ನ ತಂದೆಯ ಸಾವಿನ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿದ್ದು ಅದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಜನವರಿಯಲ್ಲಿ ಕಣ್ಣೂರಿನ ತಮ್ಮ ಮನೆಯಲ್ಲೇ ಗೂಂಡಾಗಳಿಂದ ಹತರಾದ 52 ವರ್ಷದ ಸಂತೋಷ್ ಕುಮಾರ್ ಅವರ ಪುತ್ರಿ 12 ವರ್ಷದ ವಿಸ್ಮಯ ಪ್ಲಾಕಾರ್ಡ್ ಹಿಡಿದು ಫೇಸ್ಬುಕ್ನಲ್ಲಿ ಸಂದೇಶ ರವಾನಿಸಿದ್ದಾರೆ.
ನನ್ನ ತಂದೆ ನನ್ನ ಕನಸನ್ನು ನೆರವೇರಿಸಲು ಬಯಸಿದ್ದರು. ಆದರೆ ಆ ರಾತ್ರಿ ನನ್ನೆಲ್ಲ ಕನಸುಗಳು ಕೊಚ್ಚಿ ಹೋಯಿತು, ಬಿಜೆಪಿ ಮತ್ತು ಆರ್ಎಸ್ಎಸ್ಗೆ ಬೆಂಬಲ ನೀಡಿದ್ದೇ ಅವರ ತಪ್ಪಾಯಿತು. ಅವರು ನನ್ನ ತಂದೆಯನ್ನು ಮಾತ್ರವಲ್ಲ ನನ್ನ ಕನಸನ್ನೂ ಕೊಂದರು. ನನ್ನ ಭವಿಷ್ಯ ನನಗೆ ಕತ್ತಲಾಗಿ ಕಾಣುತ್ತಿದೆ. ಕೇವಲ ಕತ್ತಲು, ಸಂಪೂರ್ಣ ಕತ್ತಲು. ಈಗಲೂ ಅವರೇಕೆ ನನ್ನ ತಂದೆಯನ್ನು ಕೊಂದರು ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ವಿಸ್ಮಯ ಪ್ಲಾಕಾರ್ಡ್ಸ್ಗಳ ಮೂಲಕ ಬೇಸರ ವ್ಯಕ್ತಪಡಿಸಿದ್ದಾಳೆ.
ಕಣ್ಣೂರು ಸೇರಿದಂತೆ ಕೇರಳದ ವಿವಿಧೆಡೆ ಕಮ್ಯೂನಿಸ್ಟ್ ಗೂಂಡಾಗಳು ಬಿಜೆಪಿ, ಆರ್ಎಸ್ಎಸ್ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.