ಮುಂಬೈ: ಅಂಕಣಗಾರ್ತಿ ಶೋಭಾ ಡೇ ಅವರಿಂದ ಅಪಹಾಸ್ಯಕ್ಕೀಡಾಗಿದ್ದ ಮುಂಬೈ ಪೊಲೀಸ್ ಇನ್ಸ್ಪೆಕ್ಟರ್ ಅವರಿಗೆ ಈಗ ವೈದ್ಯಕೀಯ ನೆರವು ಸಿಕ್ಕಿದೆ.
ಕಳೆದ ವಾರದ ಮುಂಬೈನಲ್ಲಿ ನಡೆದ ಬೃಹನ್ ಮುಂಬೈ ಮಹಾನಗರ ಚುನಾವಣೆ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ದೌಲತ್ ರಾಮ್ ಅವರ ಫೋಟೊ ಹಾಕಿದ್ದೂ ಅಲ್ಲದೇ, ‘ಮುಂಬೈಯಲ್ಲಿ ಇಂದು ಭಾರಿ ಪೊಲೀಸ್ ಬಂದೋಬಸ್ತ್’ ಎಂದು ಶೋಭಾ ಡೇ ಟ್ವೀಟ್ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ್ದ ಪೊಲೀಸ್ ಇಲಾಖೆ, ನಾವು ತಮಾಷೆಯನ್ನು ಸ್ವಾಗತಿಸುತ್ತೇವೆ, ಆದರೆ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾಡುವುದು ಸರಿಯಲ್ಲ ಎಂದಿತ್ತು.
ಶೋಭಾ ಡೇ ಅವರ ಟ್ವೀಟ್ನಿಂದ ನೊಂದಿದ್ದ ಇನ್ಸ್ಪೆಕ್ಟರ್, ಹಾರ್ಮೋನ್ ಸಮಸ್ಯೆಯಿಂದ ದೇಹದ ತೂಕ ಹೆಚ್ಚಿದೆ ಎಂದು ಹೇಳಿಕೊಂಡಿದ್ದರು. ಅವರಿಗೀಗ ಸೈಫಿ ಆಸ್ಪತ್ರೆ ನೆರವಿನ ಹಸ್ತ ನೀಡಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಸರ್ಜರಿ ಮೂಲಕ ಅವರ ದೇಹದ ಬೊಜ್ಜನ್ನು ತೆಗೆಯಲಾಗುತ್ತದೆ. ನಂತರ ಅವರು ಚೇತರಿಸಿಕೊಳ್ಳುವರು. ಸಂಪೂರ್ಣ ಗುಣಮುಖರಾದ ಮೇಲೆ ಮತ್ತೆ ಕೆಲಸಕ್ಕೆ ಹಾಜರಾಗುವರು ಎಂದು ಆಸ್ಪತ್ರೆ ಮುಖ್ಯಸ್ಥರು ತಿಳಿಸಿದ್ದಾರೆ.
ಶೋಭಾ ಡೇ ಅವರ ಕಾಮಿಡಿ ಮೊದಲು ಟೀಕೆಗೆ ಗುರಿಯಾದರೂ, ಅಂತಿಮವಾಗಿ ಪೊಲೀಸ್ ಅಧಿಕಾರಿಯೊಬ್ಬರ ಬಹುದಿನದ ದೈಹಿಕ ಸಮಸ್ಯೆಗೆ ಪರಿಹಾರ ದೊರಕಿಸಿದೆ. ಅಷ್ಟರಮಟ್ಟಿಗೆ ಡೇ ಅವರ ಟ್ವೀಟ್ಗೆ ಒಂದು ಸೆಲ್ಯೂಟ್ ಹೊಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.