ನವದೆಹಲಿ: ರಾಮ್ಜಾಸ್ ಕಾಲೇಜಿನಲ್ಲಿ ಫೆ.22ರಂದು ನಡೆದ ಘಟನೆಯನ್ನು ಖಂಡಿಸಿ ಎಬಿವಿಪಿ ವಿರುದ್ಧ ಆನ್ಲೈನ್ ಅಭಿಯಾನ ಆರಂಭಿಸಿದ್ದ ಗುರ್ಮೆಹೆರ್ ಕೌರ್ ಇಂದು ನಡೆಯಲಿರುವ ಮೆರವಣಿಗೆಯಿಂದ ಹಿಂದೆ ಸರಿಯುವ ಮೂಲಕ ಸೈಲೆಂಟ್ ಆಗಿದ್ದಾರೆ.
ಹುತಾತ್ಮ ಯೋಧನ ಪುತ್ರಿ ಗುರ್ಮೆಹೆರ್ ಸಿಂಗ್ ಸರಣಿ ಟ್ವೀಟ್ಗಳ ಮೂಲಕ ತಾನು ತಾನು ಇಂದು ನಡೆಯಲಿರುವ ‘ದೆಹಲಿ ವಿವಿ ರಕ್ಷಿಸಿ ಅಭಿಯಾನ’ (ಎಐಎಸ್ಎ)ದ ಮೆರವಣಿಗೆಯಲ್ಲಿ ಭಾಗವಹಿಸದೇ ಇರುವುದಾಗಿ ಟ್ವೀಟ್ ಮೂಲಕ ತಿಳಿದ್ದಾಳೆ.
‘ನಾನು ಈ ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ. ಎಲ್ಲರಿಗೂ ಅಭಿನಂದನೆಗಳು. ನನ್ನನ್ನು ಏಕಾಂಗಿಯಾಗಿ ಇರಲು ಬಿಡುವಂತೆ ಮನವಿ ಮಾಡುತ್ತಿದ್ದೇನೆ. ನಾನು ಏನನ್ನು ಹೇಳಲು ಬಯಸಿದ್ದೆನೋ ಅದನ್ನು ಹೇಳಿದ್ದೇನೆ’ ಎಂದು ಟ್ವೀಟ್ನಲ್ಲಿ ಹೇಳಿದ್ದಾಳೆ.
ಈ ಅಭಿಯಾನ ವಿದ್ಯಾರ್ಥಿಗಳ ಕುರಿತಾಗಿದೆ, ನನ್ನ ಬಗ್ಗೆ ಅಲ್ಲ. ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಈ ಅಭಿಯಾನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಿ ಎಂದು ಹೇಳಿದ್ದಾಳೆ.
ನನ್ನ ದೇಶಪ್ರೇಮವನ್ನು ಪ್ರಶ್ನಿಸುವವರಿಗೆ ನಾನು ತಕ್ಕ ಉತ್ತರ ನೀಡಿದ್ದೇನೆ. ಇನ್ನು ಮುಂದೆ ಹಿಂಸಾಚಾರ, ಬೆದರಿಕೆಗಳಿಗೆ ಆಶ್ರಯಿಸುವ ಮುನ್ನ ಎರಡು ಬಾರಿ ಯೋಚಿಸುವುದಂತು ಖಚಿತ ಎಂದು ಹೇಳಿದ್ದಾಳೆ.
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಶ್ವವಿದ್ಯಾಲಯದ ಆವರಣದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಮರುಸ್ಥಾಪಿಸುವ ಪ್ರಯತ್ನದೊಂದಿಗೆ ಎಐಎಸ್ಎ ಉದ್ಯೋಗಿಗಳೊಂದಿಗೆ ಖಾಲ್ಸಾ ಕಾಲೇಜಿನಲ್ಲಿ ಶಾಂತಿ ಮೆರವಣಿಗೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.