ನವದೆಹಲಿ: ’ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ’ ಎಂಬ ಬರಹವುಳ್ಳ ಫಲಕವನ್ನು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದ ಯುವತಿಗೆ, ’ನಾನು ದ್ವಿಶತಕ, ತ್ರಿಶತಕ ಹೊಡೆದಿಲ್ಲ, ನನ್ನ ಬ್ಯಾಟ್ ಹೊಡೆದಿದೆ’ ಎಂದು ಖ್ಯಾತ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ ಉತ್ತರಿಸಿದ್ದು ಬಹುಚರ್ಚೆಗೆ ಗ್ರಾಸವೊದಗಿಸಿದೆ.
ರಾಮ್ಜಾಸ್ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳ ನಡುವಿನ ಘಟನೆಯನ್ನು ಲೇಡಿ ಶ್ರೀ ರಾಮ ಕಾಲೇಜಿನ ವಿದ್ಯಾರ್ಥಿನಿ ಹುತಾತ್ಮ ಯೋಧನ ಪುತ್ರಿ ಗುರ್ಮೇಹರ್ ಕೌರ್ ಖಂಡಿಸಿದ್ದು, ಬಿಜೆಪಿ ಹಾಗೂ ಎಬಿವಿಪಿ ವಿರುದ್ಧ ಹರಿಹಾಯ್ದಿದ್ದಾರೆ.
ಫೇಸ್ಬುಕ್ನಲ್ಲಿನ ತಮ್ಮ ಪ್ರೊಫೈಲ್ ಪಿಕ್ಚರ್ ಬದಲಿಸಿಕೊಂಡಿರುವ ಆಕೆ, “I am a student from Delhi University. I am not afraid of ABVP. I am not alone. Every student of India is with me. ಎಂದೂ ಹಾಕಿಕೊಂಡಿದ್ದಾಳೆ.
ಎಬಿವಿಪಿ ಕಾರ್ಯಕರ್ತರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿರುವುದು ಖಂಡನಾರ್ಹ. ಇಂಥ ಕೃತ್ಯಗಳು ನಿಲ್ಲಬೇಕು. ಇದು ಕೇವಲ ಪ್ರತಿಭಟನಾಕಾರರ ಮೇಲಿನ ಹಲ್ಲೆಯಲ್ಲ, ಪ್ರಜಾಪ್ರಭುತ್ವದ ಆಶಯದ ಮೇಲೆ ಮಾಡಿದ ದಾಳಿ. ಪ್ರತಿ ವ್ಯಕ್ತಿಯ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೌರ್ ಬರೆದುಕೊಂಡಿದ್ದಾಳೆ.
ನೀವು ಯಾವುದಾದರೂ ಇಂಡಿಯನ್ ಯುನಿವರ್ಸಿಟಿ ಅಥವಾ ಭಾರತದ ಯಾವುದೇ ರಾಜ್ಯದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದೀರಾ? ಎಬಿವಿಪಿ ವಿರುದ್ಧ ಪ್ರತಿಭಟಿಸುವ ಆಶಯವಿದೆಯೇ? ಹಾಗಿದ್ದರೆ ನೀವೆಲ್ಲ ಸೆಲ್ಫಿ ತೆಗೆದುಕೊಂಡು, ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ, ಅದರೊಂದಿಗೆ #StudentsAgainstABVP ಬಳಸಿ ಎಂದು ಕೌರ್ ಹೇಳಿಕೊಂಡಿದ್ದಾಳೆ.
ಇದನ್ನು ಬರೆದುಕೊಳ್ಳುವ ಮೊದಲು, ನನ್ನ ತಂದೆಯನ್ನು ಪಾಕಿಸ್ಥಾನ ಕೊಂದಿಲ್ಲ, ಯುದ್ಧ ಕೊಂದಿದೆ’ಎಂಬ ಬರಹದ ಫಲಕ ಹಿಡಿದು ನಿಂತ ಪೋಸ್ಟ್ ಹಾಕಿಕೊಂಡಿದ್ದಳು. ಇದಕ್ಕೆ ವೀರೇಂದರ್ ಸೆಹ್ವಾಗ್ ಕಟುವಾಗಿ ಪ್ರತಿಕ್ರಿಯಿಸಿದ್ದೂ ಅಲ್ಲದೇ, ’ಬ್ಯಾಟ್ ಮೇ ಹೈ ದಮ್’ ಎಂದು ಟ್ವೀಟ್ ಕೂಡಾ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.