ಬೀಜಿಂಗ್: ಭಯೋತ್ಪಾದನೆ ವಿಚಾರದಲ್ಲಿ ಭಾರತ ಹಾಗೂ ಇತರ ರಾಷ್ಟ್ರಗಳಿಗೆ ಚೀನಾ ಬೆಂಬಲಿಸುತ್ತದೆ. ಈ ವಿಚಾರಗಳು ಪ್ರಮುಖವಾಗಿವೆ. ಆದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಸಹಕಾರ ಹೆಚ್ಚಿನ ಮಹತ್ವ ಪಡೆದಿದೆ ಎಂದು ಮಸೂದ್ ಅಜರ್ ಬಗ್ಗೆ ಚೀನಾದ ನಿಲುವಿನ ಕುರಿತು ಭಾರತದ ಚೀನಾ ರಾಯಭಾರಿ ಲು ಝಹುಯಿ ಹೇಳಿದ್ದಾರೆ.
ಚೀನಾ ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ವಿರೋಧಿಸುತ್ತದೆ. ಭಯೋತ್ಪಾದನೆ ಬೆದರಿಕೆ ತಡೆಗಟ್ಟಲು ಮತ್ತು ಭಯೋತ್ಪಾದನೆ ನಿಗ್ರಹ ಕ್ರಮಗಳನ್ನು ಕೈಗೊಳ್ಳುವಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಜೊತೆಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ವಿದೇಶಂಗ ಕಾರ್ಯದರ್ಶಿ ಎಸ್. ಜಯ್ಶಂಕರ್ ಭಾರತ ಮತ್ತು ಚೀನಾ ನಡುವಿನ ಮಹತ್ವದ ಮಾತುಕತೆಗಳಿಗಾಗಿ ಬೀಜಿಂಗ್ಗೆ ತೆರಳಿದ್ದು, ಅಜರ್ ಮಸೂದ್ ಮೇಲೆ 1267 ಸದಸ್ಯ ಕಮಿಟಿ ನಿರ್ಬಂಧಗಳ ಅರ್ಜಿಗೆ ಭಾತದ ತರ್ಕದ ಬಗ್ಗೆ ವಿವರಿಸಲಾಗಿದೆ. ಇದನ್ನು ಭಾರತವಲ್ಲದೇ ಇತರ ರಾಷ್ಟ್ರಗಳು ಅನುಸರಿಸಿವೆ ಎಂದು ಜಯ್ಶಂಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.