ಹೈದರಾಬಾದ್: ಮುಂದಿನ ಆರ್ಥಿಕ ವರ್ಷದಿಂದ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಹಿರಿಯ ನಾಗರಿಕರಿಗೆ ಟ್ರೈಪಾಡ್ ವಾಕಿಂಗ್ ಸ್ಟಿಕ್, ಗಾಲಿಕುರ್ಚಿ, ಶ್ರವಣ ಯಂತ್ರಗಳನ್ನು ನೀಡುವ ಪ್ರಸ್ತಾಪಿತ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಯೋಜನೆಯ ಪ್ರಸ್ತುತ ಸೂತ್ರಗಳನ್ನು ರೂಪಿಸಲಾಗುತ್ತಿದೆ ಎಂದು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಡಿಫೆನ್ಸ್ನ ಅಧ್ಯಕ್ಷ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಆನಂದ್ ಕಟೋಚ್ ಹೇಳಿದ್ದಾರೆ.
1999ರಲ್ಲಿ ರೂಪಿಸಲ್ಪಟ್ಟ ವಯಸ್ಕ ವ್ಯಕ್ತಿಗಳ ರಾಷ್ಟ್ರೀಯ ನೀತಿಯನ್ನು ಕಳೆದ ವರ್ಷ ಹಿರಿಯ ನಾಗರಿಕರ ರಾಷ್ಟ್ರೀಯ ನೀತಿ ಎಂದು ಮರುನಾಮಕರಣ ಮಾಡಲಾಗಿದ್ದು, ವಯಸ್ಕರಿಗೆ ಉತ್ತಮ ಸೇವೆಗಳನ್ನು ಒದಗಿಸಲು ಹೊಸ ವೈಶಿಷ್ಟ್ಯಗಳ ಸೇರ್ಪಡೆಗೆ ಪರಿಶೀಲಿಸಲಾಗುತ್ತಿದೆ ಎಂದು ಆನಂದ್ ಕಟೋಚ್ ಹೇಳಿದ್ದಾರೆ.
ಈ ಪ್ರಸ್ತಾವಿತ ಯೋಜನೆಗಳು ವಯಸ್ಕರಿಗಾಗಿ ಮಾನವಶಕ್ತಿಯ ತರಬೇತಿ, ಸಂಶೋಧನೆ ಚಟುವಟಿಕೆಗಳ ಪ್ರಚಾರ, ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು, ಸಂಶೋಧನಾ ಕೇಂದ್ರಗಳಿಗೆ ನೆರವು ಸೇರಿವೆ ಎಂದು ಅವರು ಹೇಲಿದ್ದಾರೆ.
ಭಾರತದಲ್ಲಿ ಸುಮಾರು 103 ಮಿಲಿಯನ್ ಹಿರಿಯ ನಾಗರಿಕರಿದ್ದು, 51 ಮಿಲಿಯನ್ ಜನರು ಬಿಪಿಎಲ್ ಅಡಿಯಲ್ಲಿ ಬರುತ್ತಾರೆ. ಇವರಿಗೆ ವಿವಿಧ ಸೇವೆಗಳ ಕೊರತೆ ಇದೆ ಎಂದು HelpAge India ಮುಖ್ಯ ಕಾರ್ಯನಿರ್ವಾಹಕ ಮ್ಯಾಥ್ಯೂ ಚೆರಿಯನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.