ಕೈಗಾಲಿ: ಭಾರತ ಹಾಗೂ ರುವಾಂಡ ಆವಿಷ್ಕಾರ, ವಿಮಾನಯಾನ ಸಂಪರ್ಕ ಹಾಗೂ ವೀಸಾ ಕ್ಷೇತ್ರಗಳ ಮೂರು ಒಪ್ಪಂದಗಳಿಗೆ ಸಹಿ ಹಾಕಿವೆ.
ಪೂರ್ವ ಆಫ್ರಿಕಾ ರಾಷ್ಟ್ರ ರುವಾಂಡಗೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಭೇಟಿ ನೀಡಿದ್ದು, ಅನ್ಸಾರಿ ಹಾಗೂ ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಆವಿಷ್ಕಾರ ಕ್ಷೇತ್ರದಲ್ಲಿ ಎರಡೂ ದೇಶಗಳು ಶೀಘ್ರದಲ್ಲೇ ಕೈಗಾಲಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದ್ದು, ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರುವಂಡ ಮುಂದಿನ ತಿಂಗಳುಗಳಲ್ಲಿ ಭಾರತಕ್ಕೆ ವಿಮಾನ ಸಂಪರ್ಕ ಆರಂಭಿಸಲಿದೆ. ಎರಡೂ ದೇಶಗಳು ವೀಸಾ ಅಗತ್ಯತೆಗಳಲ್ಲಿ ಪರಸ್ಪರ ವಿನಾಯಿತಿ ನೀಡಲಿವೆ ಎಂದು ಮೂಲಗಳು ತಿಳಿಸಿವೆ.
ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಪರಸ್ಪರ ಸಂಬಂಧಗಳನ್ನು ವಿಸ್ತರಿಸಲು ಭಾರತ-ರುವಾಂಡ ಆವಿಷ್ಕಾರ ಅಭಿವೃದ್ಧಿ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಹೇಳಿದ್ದಾರೆ.
ಈ ಮೂರು ಒಪ್ಪಂದಗಳು ಎರಡೂ ದೇಶಗಳ ನಡುವಿನ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲಿದೆ.
ಭಾರತ ಮತ್ತು ರುವಾಂಡ 5 ವರ್ಷಗಳ ಸಫಲ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಿದೆ. ಭಾರತ ಮತ್ತು ರುವಾಂಡ ಪ್ರಮುಖ ಸಂಬಂಧಗಳನ್ನು ಹಂಚಿಕೊಂಡಿದ್ದು, ಬಲವಾದ ಸಂಬಂಧಗಳನ್ನು ಬೆಳೆಸಲು ಬದ್ಧವಾಗಿದೆ ಎಂದು ರುವಾಂಡ ಪ್ರಧಾನಿ ಅನಸ್ತೇಸಿ ಮುರಕೇಜಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.