ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ತಮ್ಮ ಕುರ್ಚಿ ಗಟ್ಟಿಮಾಡಿಕೊಂಡಿದ್ದಾರೆ.
ವಿಧಾನಸಭೆಯ ಕಲಾಪದ ವೇಳೆ ಡಿಎಂಕೆ ಶಾಸಕರು ವಿಪರೀತ ದಾಂಧಲೆ ನಡೆಸಿದ್ದರ ಪರಿಣಾಮ, ಅವರನ್ನು ಹೊರಹಾಕಿಸಿದ ನಂತರ ಕಲಾಪ ಪುನಾರಂಭಿಸಿದ್ದರು. ಸಭಾಪತಿ ಧನಪಾಲ್ ಅವರು ವಿಶ್ವಾಸಮತ ನಿರ್ಣಯಕ್ಕೆ ಧ್ವನಿಮತದ ಮೂಲಕ ವ್ಯಕ್ತಪಡಿಸಲು ಅವಕಾಶ ನೀಡಿದ್ದರು.
ಹಾಜರಿದ್ದ 133 ಜನ ಶಾಸಕರಲ್ಲಿ 122 ಜನ ಶಾಸಕರು ಪಳನಿಸ್ವಾಮಿ ಪರ ಮತಚಲಾಯಿಸದ್ದರು. 71 ಜನ ಶಾಸಕರ ಅವಶ್ಯಕತೆ ಇತ್ತು. ಇದರಿಂದ ಪನ್ನೀರಸೆಲ್ವಂಗೆ ಮುಖಭಂಗವುಂಟಾಯಿತು. ಸದನದಲ್ಲಿ ಪಳನಿಸ್ವಾಮಿ ವಿಶ್ವಾಸಮತ ಯಾಚನೆ ವೇಳೆ ಎಐಎಡಿಎಂಕೆ ಶಾಸಕರು ಮಾತ್ರ ಹಾಜರಿದ್ದರು.
ಶನಿವಾರ ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭಗೊಂಡಾಗ ಹೊಡೆದಾಟ, ಕೋಲಾಹಲದಿಂದಾಗಿ ಸ್ಪೀಕರ್ ಧನಪಾಲ್ ಅವರು 2 ಬಾರಿ ಕಲಾಪ ಮುಂದೂಡಿದ್ದರು. ಓ.ಪನ್ನೀರ್ ಸೆಲ್ವಂ ಹಾಗೂ ಡಿಎಂಕೆ ಶಾಸಕರು ಗುಪ್ತ ಮತದಾನ ನಡೆಸುವಂತೆ ಆಗ್ರಹಿಸಿದ್ದರು. ಆದರೆ ಸ್ಪೀಕರ್ ಗುಪ್ತ ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಕೋಲಾಹಲ ನಡೆಸಿದ ಡಿಎಂಕೆ ಶಾಸಕರು ಸ್ಪೀಕರ್ ಅವರ ಬಳಿ ಘೇರಾವ್ ಹಾಕಿ ಟೇಬಲ್ ಎಸೆದು ಬಲ ಪ್ರದರ್ಶಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.