ಲಂಡನ್: ಇದೇ ಫೆ.27 ರಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ನಡೆಯಲಿರುವ ಯುಕೆ-ಇಂಡಿಯಾ ಸಾಂಸ್ಕೃತಿಕ ಉತ್ಸವಕ್ಕೆ ಆಸ್ಕರ್ ಖ್ಯಾತಿಯ ಜೈಹೊ ಮೆರಗು ನೀಡಲಿದೆ.
ಉತ್ಸವದ ಆರಂಭಕ್ಕೆ ವಿಶ್ವಖ್ಯಾತಿಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಜೈಹೊ ಗೀತೆಯನ್ನು ಪ್ರಸ್ತುಪಡಿಸಲು ಗ್ರೆನೇಡಿಯರ್ ಬ್ಯಾಂಡ್ ಮುಂದಾಗಿದೆ.
ಈ ಸಾಂಸ್ಕೃತಿಕ ಉತ್ಸವದ ಭಾಗವಾಗಿ ಸಂಜೆ ಏರ್ಪಡಿಸಿರುವ ಔತಣದಲ್ಲಿ ರಾಣಿ ಎರಡನೆಯ ಎಲಿಜಬತ್ ತಮ್ಮ ಪತಿ, ಯುವರಾಜ ವಿಲಿಯಂ ಹಾಗೂ ಸೊಸೆ ಕೇಟ್ ಅವರೊಂದಿಗೆ ಭಾಗವಹಿಸಲಿದ್ದಾರೆ.
ಉತ್ಸವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದು, ಉಭಯ ದೇಶಗಳ ನಡುವಿನ ಸಾಂಸ್ಕೃತಿಕ ಬೆಸುಗೆ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಅರಮನೆಯ ಮೂಲಗಳು ತಿಳಿಸಿವೆ.
ಭಾರತದ ಪರವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕುನಾಲ್ ನಯ್ಯರ್, ನೇಹಾ ಕಪೂರ್, ಕಪಿಲ್ ದೇವ್, ಆಯೇಶಾ ಧರ್ಕರ್ ಮುಂತಾದವರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಕ್ರೀಡೆ, ಸಿನೇಮಾ ಇತ್ಯಾದಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ.
ಸಂಜೆ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಯು.ಕೆ. ಬಾಣಸಿಗರು ಸಿದ್ಧಪಡಿಸಿದ ಅಪರೂಪದ ಮೆನು ಸವಿಯುವ ಅವಕಾಶವಿದೆ. ಇದೇ ಸಂದರ್ಭದಲ್ಲಿ ಭಾರತಕ್ಕೆ ಹಿಂದಿನ ರಾಜರು ಭೇಟಿ ನೀಡಿದ ಸಂದರ್ಭದಲ್ಲಿ ನೀಡಲಾಗಿರುವ ವಿಶೇಷ ಉಡುಗೊರೆಗಳು, ರಾಯಲ್ ಗ್ರಂಥಾಲಯದಲ್ಲಿರುವ ಹಸ್ತಪ್ರತಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
2015 ರಲ್ಲಿ ಇಂಗ್ಲೆಂಡ್ಗೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಯುಕೆ ಹಾಗೂ ಭಾರತದ ಸಾಂಸ್ಕೃತಿಕ ಉತ್ಸವ ಕುರಿತು ಘೋಷಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.