ನವದೆಹಲಿ: ದೇಶದ ಹಿತಾಸಕ್ತಿ ದೃಷ್ಟಿಯಿಂದ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಮುಕ್ತ ಅವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ ಹೇಳಿದ್ದಾರೆ.
ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಉಗ್ರರ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕುರಿತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ನೀಡಿದ ಹೇಳಿಕೆ ರಾಜಕೀಯ ಬಣ್ಣ ಪಡೆದಿತ್ತು.
ಸೇನಾ ಕಾರ್ಯಚಟುವಟಿಕೆಗೆ ಅಡ್ಡಿ ಮಾಡುವವರಿಗೆ ಮಾತ್ರ ಬಿಪಿನ್ ರಾವತ್ ಅವರ ಹೇಳಿಕೆ ಸೀಮಿತಗೊಂಡಿದ್ದು, ಅದನ್ನು ಎಲ್ಲ ಜನರಿಗೂ ಅನ್ವಯಿಸಿ ಅರ್ಥೈಸುವುದು ತಪ್ಪಾಗುತ್ತದೆ ಎಂದಿರುವ ಸಚಿವ ಪರಿಕ್ಕರ್, ಅಲ್ಲಿನ ಸಂದರ್ಭಕ್ಕನುಸಾರವಾಗಿ ನಿರ್ಣಯ ಕೈಗೊಳ್ಳುವ ಸ್ವಾತಂತ್ರ್ಯ ಸೇನಾ ಮುಖ್ಯಸ್ಥರಿಗಿದೆ ಎಂದಿದ್ದಾರೆ.
ದಾರಿತಪ್ಪಿ ನಡೆಯುತ್ತಿರುವ ಯುವಜನತೆ ಮುಖ್ಯವಾಹಿನಿಗೂ ಬರುವಂತೆ ರಾವತ್ ಅವರು ಹೇಳಿದ್ದು, ಕಾಶ್ಮೀರದ ಜನತೆ ಯಾವುದೇ ರೀತಿ ಭಯಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುವಾಗ ಕೈಯಲ್ಲಿ ಗನ್ ಹಿಡಿದು ಸೇನೆ ಅಡ್ಡಿಪಡಿಸುವ ಸ್ಥಳೀಯರನ್ನೂ ದೇಶ ವಿರೋಧಿಗಳು ಎಂದು ಪರಿಗಣಿಸುವುದಾಗಿ ರಾವತ್ ಹೇಳಿದ್ದರು. ಅವರ ಹೇಳಿಕೆಗೆ ಕಾಂಗ್ರೆಸ್ ಆದಿಯಾಗಿ ಉಳಿದ ಕೆಲ ಪಕ್ಷಗಳು ರಾಜಕೀಯ ಬಣ್ಣ ಬಳಿದಿದ್ದವು. ಅದರ ಬೆನ್ನಲ್ಲೇ ಶುಕ್ರವಾರ ಕಾಶ್ಮೀರದಲ್ಲಿ ಮತ್ತೆ ಪಾಕ್ ಧ್ವಜಗಳು ರಾರಾಜಿಸಿದ್ದಲ್ಲದೇ, ಯುವಕರ ಗುಂಪು ರಕ್ಷಣಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದವು.
ಇದೀಗ ರಕ್ಷಣಾ ಸಚಿವರೇ ಬಿಪಿನ್ ರಾವತ್ ಅವರ ಹೇಳಿಕೆಯ ಅಂತರಾರ್ಥವನ್ನು ಸ್ಪಷ್ಟಪಡಿಸಿದ್ದಾರೆ. ದೇಶದ ಭದ್ರತೆ ದೃಷ್ಟಿಯಿಂದ ಕೆಲವು ಮಹತ್ವದ ನಿರ್ಧಾರ ಕೈಗೊಳ್ಳುವ ಹಕ್ಕು ಸೇನಾಧಿಕಾರಿಗಳಿಗೂ ನೀಡಲಾಗಿರುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.