ಬೀಜಿಂಗ್: ಸದ್ಯದಲ್ಲೇ ನಡೆಯಲಿರುವ ಭಾರತ ಮತ್ತು ಚೀನಾ ನಡುವಿನ ನಿಯೋಜಿತ ಮಾತುಕತೆಗೂ ಮುನ್ನ ವಿಶ್ವಸಂಸ್ಥೆಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್ ನಿಷೇಧವನ್ನು ಬೆಂಬಲಿಸಲು ಬಲವಾದ ಸಾಕ್ಷ್ಯಗಳ ಅಗತ್ಯವಿದೆ ಎಂದು ಚೀನಾ ಹೇಳಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಸದಸ್ಯ ಸಮಿತಿಯಲ್ಲಿ ಅಜರ್ ಮಸೂದ್ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿ, ನಿಷೇಧ ಹೇರುವ ಅಮೇರಿಕಾದ ಪ್ರಯತ್ನಗಳ ವಿರುದ್ಧ ಹಲವು ತಂತ್ರಗಳ ಮೂಲಕ ಹಿಡಿತವನ್ನು ಇಟ್ಟುಕೊಂಡಿರುವ ಚೀನಾ, ಅಜರ್ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿದ್ದಲ್ಲಿ ಮಾತ್ರವೇ ಈ ನಡಗೆ ಚೀನಾ ಬೆಂಬಲಿಸಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.
ಚೀನಾ ವಸ್ತುನಿಷ್ಠೆ, ನಿಷ್ಪಕ್ಷಪಾತ ಮತ್ತು ವೃತ್ತಿಪರತೆಯ ತತ್ವಗಳನ್ನು ಎತ್ತಿ ಹಿಡಿಯುತ್ತದೆ ಹಾಗೂ ಪ್ರಸ್ತುತ ಚರ್ಚೆಗಳಲ್ಲಿ ಭಾಗವಹಿಸುತ್ತದೆ. ಅಜರ್ ಮಸೈದ್ನನ್ನು ನಿಷೇಧಿಸುವ ಭಾರತದ ಕಳೆದ ವರ್ಷದ ಅರ್ಜಿ ಅಥವಾ ಈ ವರ್ಷ ಸಂಬಂಧಿತ ರಾಷ್ಟ್ರದ ಅರ್ಜಿ ಯಾವುದೇ ಇದ್ದರೂ ಚೀನಾದ ನಿಲುವು ಸ್ಥಿರವಾಗಿರುತ್ತದೆ ಎಂದು ಗೆಂಗ್ ಶುವಾಂಗ್ ಹೇಳಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜಯ್ಶಂಕರ್ ಹಾಗೂ ಚೀನಾದ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಜಾಂಗ್ ಯೆಸುಯಿ ಫೆ.22ರಂದು ಬೀಜಿಂಗ್ನಲ್ಲಿ ವಿವಿಧ ಯೋಜನೆಗಳ ಕುರಿತು ಎರಡನೇ ಹಂತದ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.