ಬನಿವಾಡಿ (ಹರ್ಯಾಣಾ): ಇದೊಂದು ಮನಕಲಕುವ ಸನ್ನಿವೇಶ. ಪತಿ ವೀರಮರಣವನ್ನಪ್ಪಿದ ಸುದ್ದಿ ಕೇಳಿದ ಮೇಲೆ, ಅವನು ಪ್ರೀತಿಯಿಂದ ಕಳುಹಿಸಿದ್ದ ಉಡುಗೊರೆಗಳು ಅವಳಿಗೆ ತಲುಪಿದ್ದವು. ಅವಳ ದುಃಖದ ಕಟ್ಟೆಯೊಡೆದು ಹೋಗಿತ್ತು.
ಉಗ್ರರೊಂದಿಗಿನ ಹೋರಾಟದಲ್ಲಿ ಮೇ.ಸತೀಶ್ ದಹಿಯಾ ಅವರು ಫೆ.14 ರಂದು ವೀರಮರಣವನ್ನಪ್ಪಿದ್ದು. ಅದರ ಮರುದಿನವೇ ಅವರ ವಿವಾಹದ ಮೂರನೇ ವಾರ್ಷಿಕೋತ್ಸವ. ಹರಿಯಾಣದ ಬನಿವಾಡಿ ಗ್ರಾಮದಲ್ಲಿ ನೆಲೆಸಿದ್ದ ಪ್ರೀತಿಯ ಪತ್ನಿ ಸುಜಾತಾಗೆ ಮೇ.ಸತೀಶ್ ಕಳಿಸಿದ್ದ ಹೂವಿನ ಬೊಕ್ಕೆ, ಕ್ಯಾಂಡಲ್, ಕೇಕ್ ಇತರ ಉಡುಗೊರೆಗಳನ್ನು ಕಳಿಸಿದ್ದರು. ಪತಿ ಹುತಾತ್ಮರಾದ ನಂತರ ಅವಳ ಕೈಸೇರಿದ್ದವು.
ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಸತೀಶ್ ದಹಿಯಾ ಹುತಾತ್ಮರಾಗಿದ್ದಾರೆ. ಅವರಿಗೆ 2 ವರ್ಷದ ಮಗಳಿದ್ದಾಳೆ. ಮೂರನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಖುಷಿಯಲ್ಲಿದ್ದ ಮನೆಯಲ್ಲಿ ಅಕ್ಷರಶಃ ಸ್ಮಶಾನಮೌನ.
ಅದರಲ್ಲಿ ಐ ಲವ್ ಯೂ ಅಂತಾ ಬರೆದಿದ್ದ ಸತೀಶ್, ನೀನೇ ನನಗೆ ಪ್ರೇರಣೆ ಎನ್ನುವ ಸಂದೇಶವನ್ನು ಪತ್ನಿಗೆ ಕಳಿಸಿದ್ದರು. ಸತೀಶ್ ದಹಿಯಾ ಮನೆಗೆ ಒಬ್ಬನೇ ಮಗ. ಕರುಳ ಕುಡಿಯನ್ನು ಕಳೆದುಕೊಂಡ ಹೆತ್ತವರು ದಿಕ್ಕುತೋಚದಂತಾಗಿದ್ದಾರೆ. ಪತಿಯ ಮರಣ ವಾರ್ತೆ ನಂತರ ಉಡುಗೊರೆ ಪಡೆದ ಪತ್ನಿಯ ಸ್ಥಿತಿ ನಿಜಕ್ಕೂ ಹೃದಯ ವಿದ್ರಾವಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.