ಜೈಪುರ : ಮೌರ್ಯ, ಮೊಘಲ್ ಹಾಗೂ ಗುಪ್ತರ ಇತಿಹಾಸ ಗೊತ್ತಿದೆ. ಆದರೆ ನಮ್ಮ ನೆಲದ ಇತಿಹಾಸವೇ ನಮಗೆ ಗೊತ್ತಾಗುತ್ತಿಲ್ಲ. ಈಶಾನ್ಯ ರಾಜ್ಯ ಅದರಲ್ಲೂ ವಿಶೇಷವಾಗಿ ಅಸ್ಸಾಂನ ಐತಿಹಾಸಿಕ ವೈಭವದ ಮಹತ್ವ ಕುರಿತು ಪಠ್ಯದಲ್ಲಿ ಉಲ್ಲೇಖವೇ ಇಲ್ಲ. ಈ ನಿಟ್ಟಿನಲ್ಲಿ ಗಮನಹರಿಸುವಂತೆ ಕೋರಿ 12 ಬಾಲೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾಳೆ.
ಅವಳು ಆಯಿರಾ ಗೋಸ್ವಾಮಿ. ಮೂಲತಃ ಅಸ್ಸಾಂನ ಹುಡುಗಿ. ಸದ್ಯ ಜೈಪುರದ ನೀರಜ್ ಮೋದಿ ಶಾಲೆಯಲ್ಲಿ ಓದುತ್ತಿದ್ದಾಳೆ. ಅವಳಿಗೆ ಇತಿಹಾಸ ಅಧ್ಯಯನ ಎಂದರೆ ತುಂಬಾ ಇಷ್ಟವಂತೆ. ಆದರೆ ಇಡೀ ಇತಿಹಾಸದಲ್ಲಿ ಎಲ್ಲಿಯೂ ಈಶಾನ್ಯ ರಾಜ್ಯ ಹಾಗೂ ಅಸ್ಸಾಂನ ಕುರಿತು ಎಲ್ಲಿಯೂ ಪ್ರಸ್ತಾಪವೇ ಇಲ್ಲ ಎಂಬುದು ಅವಳ ಆಕ್ಷೇಪ.
ಜಮ್ಮು ಮತ್ತು ಕಾಶ್ಮೀರದಿಂದ ತಮಿಳುನಾಡುವರೆಗೂ, ಮೊಘಲರಿಂದ ಬ್ರಿಟೀಷರವರೆಗೂ, ರಾಜಸ್ಥಾನದಿಂದ ಕೊಲ್ಕತ್ತಾವರೆಗೂ ಹೀಗೆ ಭಾರತದ ಇತಿಹಾಸದ ಕುರಿತು ಸಾಕಷ್ಟು ತಿಳಿದುಕೊಂಡಿರುವೆ ಎಂದಿರುವ ಅವಳು, ಅಸ್ಸಾಂ, ಈಶಾನ್ಯ ರಾಜ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಏನೂ ಗೊತ್ತಾಗುತ್ತಲೇ ಇಲ್ಲ. ಆದ್ದರಿಂದ ನಾವು ನಮ್ಮ ಪ್ರಾದೇಶಿಕ ಐತಿಹಾಸಿಕ ಮಹತ್ವ ತಿಳಿಯಲು ಉತ್ಸುಕರಾಗಿರುವುದಾಗಿ ಅವಳು ತಿಳಿಸಿದ್ದಾಳೆ.
ಮೊಘಲರು, ಆಂಗ್ಲರೇ ತುಂಬಿಕೊಂಡಿರುವ ನಮ್ಮ ಭಾರತದ ಚರಿತ್ರೆಯ ಪಠ್ಯ ಬದಲಾಗುವ ಅವಶ್ಯಕತೆಯೂ ಪ್ರಸ್ತುತವಾಗಿದೆ. ನಮ್ಮ ನೆಲದ ವೈಶಿಷ್ಟ್ಯ, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಷಯಗಳನ್ನು ಅಳವಡಿಸಬೇಕಿದೆ. ನಮ್ಮ ಮೇಲೆ ಆಕ್ರಮಣ ಮಾಡಿದವರಿಗಿಂತ, ಅವರನ್ನು ಎದುರಿಸಿದ ನಮ್ಮ ವೀರರಗಾಥೆಯನ್ನು ಯುವ ಪೀಳಿಗೆಗೆ ತಿಳಿಸಬೇಕಿದೆ.
ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿಯಲ್ಲೇ ಮುಳುಗಿ ಹೋಗಿರುವ ನಮಗೆ, ಭಾರತ ಇತಿಹಾಸದ ಚರಿತ್ರೆಯ ಸತ್ಯದರ್ಶನವಾಗಬೇಕಿದೆ. ಆಳುವ ಸರ್ಕಾರಗಳೂ ಇತ್ತ ಚಿತ್ತ ಹರಿಸಬೇಕಿದೆ. 12ರ ಓರ್ವ ಬಾಲೆ ನೇರವಾಗಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಪ್ರಜಾಪ್ರಭುತ್ವದ ಅಸ್ತಿತ್ವ ಸಾರಿದ್ದಾಳೆ. ಜಾಗತಿಕ ಮಟ್ಟದಲ್ಲಿ ಭಾರತ ಬೆಳಗುವಂತೆ ಮಾಡುತ್ತಿರುವ ಪ್ರಧಾನಿ ಮೋದಿ ಅವರು ಪುಟ್ಟ ಪೋರಿಯ ಪತ್ರಕ್ಕೂ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.