ಕತ್ರಾ: ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ ವಿಪತ್ತು ತಗ್ಗಿಸುವಿಕೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದೆ.
ಸಮುದ್ರ ಮಟ್ಟದಿಂದ 5200 ಮೀಟರ್ ಎತ್ತರದಲ್ಲಿರುವ ಈ ದೇವಾಲಯ ಭೂಕಂಪ, ಭೂಕುಸಿತ, ಬಂಡೆಕಲ್ಲು ಉರುಳುವಿಕೆ, ಆಲಿಕಲ್ಲು, ಕಾಡ್ಗಿಚ್ಚು, ಧಾರಾಕಾರ ಮಳೆ ಹೀಗೆ ಹಲವಾರು ನೈಸರ್ಗಿಕ ವಿಪತ್ತಿಗೆ ಒಳಪಟ್ಟಿದೆ.
ಇದಕ್ಕಾಗಿ ದೇವಾಯ ಮಂಡಳಿ ಇವುಗಳ ಪ್ರಭಾವ ತಗ್ಗಿಸಲು ತಾಂತ್ರಿಕ ವ್ಯವಸ್ಥೆ, ತರಬೇತಿ, ಮೂಲಸೌಕರ್ಯ ಸೃಷ್ಟಿ ಮೂಲಕ ಸಾಮರ್ಥ್ಯ ಹೆಚ್ಚಿಸುವುದು, ಜನಜಾಗೃತಿ ಮೂಡಿಸುವುದು ಮೊದಲಾದ ನೀತಿಗಳನ್ನು ಅನುಸರಿಸುತ್ತಿದೆ.
ವಿಪತ್ತು ತಡೆಗಟ್ಟುವಿಕೆ ಯೋಜನೆಯ ಭಾಗವಾಗಿ ಮಂಡಳಿ ಬೆಟ್ಟಗಳಲ್ಲಿ ಸ್ಥಿರ ಇಳಿಜಾರು, ಕಲ್ಲುಗಳು ಬೀಳದಂತೆ ಶೆಡ್ಗಳ ನಿರ್ಮಾಣ, ಆಕಸ್ಮಿಕವಾಗಿ ಬೀಳುವುದನ್ನು ತಡೆಗಟ್ಟಲು ಚೈನ್ಲಿಂಕ್ ಬೇಲಿಗಳ ನಿರ್ಮಾಣ ಮೊದಲಾದ ಪ್ರಮುಖ ಮೂಲಭೂತ ಯೋಜನೆಗಳನ್ನು ಕೈಗೊಂಡಿದೆ.
ಯಾವುದೇ ದುರಂತ/ತುರ್ತು ಸಂದರ್ಭದ ವೇಳೆ ಮೂಲಭೂತ ವ್ಯವಸ್ಥೆಯನ್ನು ಹೆಚ್ಚಿಸಲು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ವಿಪತ್ತು ನಿರ್ವಹಣಾ ಸಾಧನಗಳೊಂದಿಗೆ 8 ವಿಪತ್ತು ನಿರ್ವಹಣಾ ಸ್ಟೋರ್ಗಳನ್ನು ಸ್ಥಾಪಿಸಿದೆ. ಯಾತ್ರೆ ಸಂಬಂಧಿತ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ವಿವಿಧ ತಂಡಗಳು ಮತ್ತು ಮಧ್ಯಸ್ಥಗಾರರು ಜಂಟಿಯಾಗಿ ನಿರ್ವಹಿಸುವ ಆಧುನಿಕ ಸಂವಹನ ಮತ್ತು ತಂತ್ರಜ್ಞಾನದೊಂದಿಗೆ 5 ಜಂಟಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ವೈದ್ಯಕೀಯ ಪ್ರಥಮ ಚಿಕಿತ್ಸೆಗಾಗಿ 6 ವೈದ್ಯಕೀಯ ಪರಿಹಾರ ಮತ್ತು ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ. ವೇಗದ ವೈದ್ಯಕೀಯ ಸೇವೆಗಳಿಗಾಗಿ ಹೆಲಿಕಾಪ್ಟರ್ ವ್ಯವಸ್ಥೆ, ತುರ್ತು ವೈದ್ಯಕೀಯ ಔಷಧಾಲಯಗಳು, ಸಮುದಾಯ ಆರೋಗ್ಯ ಕೇಂದ್ರ, 230 ಹಾಸಿಗೆಗಳಿರುವ ಚಿಕಿತ್ಸಾ ಸೌಲಭ್ಯಗಳಿರುವ ಮಾತಾ ವೈಷ್ಣೋ ದೇವಿ ನಾರಾಯಣ ಸೂಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ ಸ್ಥಾಪಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಮಾಹಿತಿಗಳ ಪ್ರಸರಣಕ್ಕಾಗಿ ವಿವಿಧೋದ್ದೇಶ ಆಡಿಯೋ ವ್ಯವಸ್ಥೆಗೆ ೧೨ ಕಿ.ಮೀ. ಮಾರ್ಗದಲ್ಲಿ ಭೂಮಿಯ ತಳಭಾಗದಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.