ಬೆಂಗಳೂರು: ವಿಶ್ವದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2017ಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬೆಂಗಳೂರಿನ ಯಲಹಂಕ ವಾಯನೆಲೆ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಿದ್ದು, ಈ ವೇಳೆ ಮೊದಲ ದೇಶೀಯ ವಾಯುಗಾಮಿ ಕ್ಷಿಪ್ರ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AEW&C) ವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿದ್ದಾರು.
ಮನೋಹರ್ ಪರಿಕ್ಕರ್ ಅವರು ಐಎಫ್ ತಂಡಕ್ಕೆ ಸಮರ ವಿಮಾನಗಳ ಕೀಗಳನ್ನು ಸಾಂಕೇತಿಕವಾಗಿ ನೀಡಿದ್ದು, ಈ ಯುದ್ಧ ವಿಮಾನಗಳು ಪಂಜಾಬ್ನ ಭತಿಂಡ ವಾಯುನೆಲೆಯಿಂದ ಹಾರಾಡಲಿವೆ.
ಇದು ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾದ 11ನೇ ಆವೃತ್ತಿ ಆಗಿದ್ದು, ಫೆ. 18ರ ವರೆಗೆ ನಡೆಯಲಿದೆ.
ನೇತ್ರ ಯುದ್ಧ ವಿಮಾನ 300 ಕಿ.ಮೀ. ವ್ಯಾಪ್ತಿ ಮತ್ತು 360 ಡಿಗ್ರಿ ಕೋನ ಹೊಂದಲಿದೆ ದೇಶೀಯವಾಗಿ ನಿರ್ಮಿಸಿದ ಆಕ್ಟಿವ್ ಇಲೆಕ್ಟ್ರಾನಿಕ್ ಸ್ಕ್ಯಾನ್ ರೆಡಾರ್, ಸೆಕೆಂಡರಿ ಸ್ಕ್ಯಾನ್ ರೆಡಾರ್, ಇಲೆಕ್ಟ್ರಾನಿಕ್ ಸಂವಹನ ನಿಗ್ರಹ ಕ್ರಮಗಳು, ದೃಷ್ಟಿ ರೇಖೆ(ಎಲ್ಒಎಸ್), ಎಲ್ಒಎಸ್ ಡಾಟಾ ಲಿಂಕ್, ಧ್ವನಿ ಸಂವಹನ ವ್ಯವಸ್ಥೆ ಹಾಗೂ ಸ್ವಯಂ ರಕ್ಷಣಾ ಸೂಟ್ ಹೊಂದಿದೆ.
ಸೆನ್ಸಾರ್ಗಳಿಂದ ಪಡೆದ ಡಾಟಾವನ್ನು ಸಂಸ್ಕರಿಸಲು ನೇತ್ರ ವಿಮಾನಗಳಲ್ಲಿ ಸಾಫ್ಟವೇರ್ ಅಳವಡಿಸಲಾಗಿದೆ. ಈ ಸೆನ್ಸಾರ್ಗಳು ಮಾಹಿತಿಗಳನ್ನು ಸಂಗ್ರಹಿಸಿ ವಾಯುಗಾಮಿ ಬೆದರಿಕೆಗಳ ಸುಸಂಬದ್ಧ ಚಿತ್ರಣವನ್ನು ನೀಡಲಿದೆ.
ಪ್ರಸ್ತುತ ಐಎಎಫ್ 2 ನೇತ್ರ ಯುದ್ಧ ವಿಮಾನಗಳನ್ನು ಕೊಳ್ಳಲಿದ್ದು, ಭವಿಷ್ಯದಲ್ಲಿ ಭಾರತೀಯ ಇಂಜಿನಿಯರ್ಗಳು ಇದನ್ನು ಇನ್ನಷ್ಟು ಉತ್ತಮಗೊಳಿಸಲಿದ್ದಾರೆ ಎಂದು ಮನೋಹರ್ ಪರಿಕ್ಕರ್ ಭರವಸೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.