ನವದೆಹಲಿ: ಜಾಗತಿಕವಾಗಿ ಆತಂಕ ಉಂಟುಮಾಡಿರುವ ಭಯೋತ್ಪಾದನೆ ಹಾಗೂ ತೀವ್ರವಾದಿಗಳ ವಿರುದ್ಧ ಉಭಯ ದೇಶಗಳ ಸಂಸದರು ಧ್ವನಿ ಎತ್ತಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂಗ್ಲೆಂಡಿನ ಸಂಸದರ ನಿಯೋಗ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ತಡೆಯುವಲ್ಲಿ ಭಾರತ ಹಾಗೂ ಯುಕೆ ದ್ವಿಪಕ್ಷೀಯ ಸಂಬಂಧ ಮೊದಲಿನಿಂದಲೂ ಗಟ್ಟಿಯಾಗಿಯೇ ಇದೆ ಎಂದು ಹೇಳಿದ್ದಾರೆ.
ಉಭಯ ದೇಶಗಳ ಸಂಬಂಧ ವೃದ್ಧಿ ಹಾಗೂ ಉಗ್ರತ್ವ ನಿವಾರಣೆಯ ಹಿನ್ನೆಲೆಯಲ್ಲಿ ಎರಡೂ ದೇಶಗಳ ಸಂಸದರು ಪರಸ್ಪರ ಚರ್ಚಿಸುವಂತಾಗಲಿ ಎಂದು ಅವರು ಆಶಿಸಿದ್ದಾರೆ.
2015 ರಲ್ಲಿ ತಾವು ಇಂಗ್ಲೆಂಡ್ಗೆ ಹೋಗಿದ್ದು ಹಾಗೂ 2016 ರಲ್ಲಿ ಇಂಗ್ಲೆಂಡ್ನ ಪ್ರಧಾನಿ ಭಾರತಕ್ಕೆ ಬಂದಿದ್ದ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.