ಚೆನ್ನೈ: ವಿ.ಕೆ. ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಕಂಡು ಬಂದಿದ್ದು, ಅವರು ತಕ್ಷಣ ಪೊಲೀಸರಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದೀಗ ಅವರನ್ನು ಮುಂದಿನ 10 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿದ್ದು, ಶಶಿಕಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದ ತಮಿಳುನಾಡು ಮುಖ್ಯಮಂತ್ರಿಯಾಗುವ ಅವರ ಆಕಾಂಕ್ಷೆ ಹುಸಿಯಾಗಿದೆ.
ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಾಧೀಶರು ವಿ.ಕೆ. ಶಶಿಕಲಾ ಭ್ರಷ್ಟಾಚಾರದಲ್ಲಿ ತಪ್ಪಿತಸ್ಥೆ ಎಂದು ಹೇಳಿದ್ದು, ಈ ಆದೇಶ ಹೊರಡಿಸಿದ್ದಾರೆ. ಶಶಿಕಲಾ ಅವರು 90ರ ದಶಕದಲ್ಲಿ ಅಕ್ರಮ ಸಂಪತ್ತು ಹೊಂದಿದ್ದರು ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೇಳಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ತಮ್ಮ ಆಡಳಿತದ ಮೊದಲ ಅವಧಿಯಲ್ಲಿ 60 ಕೋಟಿ ಸ್ವತ್ತುಗಳ ಹಂಚಿಕೆ ಆಸ್ತಿಯನ್ನು ಶಶಿಕಲಾ ಅವರ ಜೊತೆ ಹಂಚಿಕೊಂಡಿದ್ದರು. ಜಯಲಲಿತಾ ಅವರು ಶಶಿಕಲಾ ಅವರ ಸಂಬಂಧಿಕರನ್ನು ಈ ಆಸ್ತಿಗಳ ಮೇಲಿನ ಹಕ್ಕಿನಿಂದ ವಜಾಗೊಳಿಸಿದ್ದರು ಎಂದು ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ವೇಳೆ ಶಶಿಕಲಾ ಅವರು ತಮ್ಮ 120 ಶಾಸಕರ ಜೊತೆ ರೆಸಾರ್ಟ್ನಲ್ಲಿ ಇದ್ದು, ಶಶಿಕಲಾ ಅವರು ‘ತಪ್ಪಿತಸ್ಥೆ’ ಎಂದು ಕೋರ್ಟ್ ತೀರ್ಪು ನೀಡಿದಂತೆ ಪೊಲೀಸರು ಶಶಿಕಲಾ ಅವರ ರೆಸಾರ್ಟ್ಗೆ ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.