ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ, ನೋಟಾ ಕುರಿತ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರೊಬ್ಬರು ನಿರತರಾಗಿದ್ದಾರೆ.
ಕಪರ್ತಲಾ ಎಂಬ ತರಬೇತಿ ಶಾಲೆಯೊಂದನ್ನು ನಡೆಸುವ ಶಿಕ್ಷಕ ಅರವಿಂದ ಎಂಬುವರೇ ಈ ನೂತನ ಪ್ರಚಾರದ ರೂವಾರಿ. ಉತ್ತಮ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದಲ್ಲಿ ಅವರನ್ನು ಕಾನೂನು ಬದ್ಧವಾಗಿಯೇ ತಿರಸ್ಕರಿಸಿ ಎಂದು ಅರವಿಂದ ಪ್ರಚಾರ ಮಾಡುತ್ತಿದ್ದು, ಸಾಮಾಜಿಕ ಜಾಲತಾಣವನ್ನೂ ಅವರು ತಮ್ಮ ಈ ನೂತನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಅವರ ಈ ಪ್ರಚಾರಕ್ಕೆ ಈಗಾಗಲೇ ಅವರು 10 ಸಾವಿರಕ್ಕಿಂತಲೂ ಹೆಚ್ಚು ಜನರು ಆಕರ್ಷಿತರಾಗಿದ್ದು, ನೋಟಾ ಬಗ್ಗೆ ಮಾಹಿತಿ ಪಡೆದಿದ್ದಾರಂತೆ. ಅನಿಲ್, ಅಶೋಕ, ವಿಕಾಸ್ ಎಂಬುವರು ಹಾಗೂ ಅರವಿಂದ ಅವರ ಶಿಷ್ಯ ಬಳಗವೂ ಕೂಡಾ ಈ ಜಾಗೃತಿ ಕಾರ್ಯಕ್ಕೆ ಸಾಥ್ ನೀಡುತ್ತಿದ್ದಾರೆ.
ಅದೆಷ್ಟೋ ಅಭ್ಯರ್ಥಿಗಳು ಚುನಾವಣೆ ಬಂದಾಗ ಮಾತ್ರ ರ್ಯಾಲಿಗಳ ಮೂಲಕ ಜನರ ಬಳಿ ಬರುತ್ತಾರೆ. ಆದರೆ ಗೆದ್ದ ನಂತರ ಮತದಾರರ ಬಳಿ ಬರುವುದನ್ನೇ ಅವರು ಮರೆತು ಬಿಡುತ್ತಾರೆ. ಇದರರ್ಥ ಎಲ್ಲರೂ ಕೆಟ್ಟ ಅಭ್ಯರ್ಥಿಗಳೇ ಇರುತ್ತಾರೆಂದಲ್ಲ. ಎಲ್ಲ ಪಕ್ಷಗಳಲ್ಲಿಯೂ ಉತ್ತಮರೂ ಇರುತ್ತಾರೆ. ಆದರೆ ಸ್ಪರ್ಧಿಸಿದವರಲ್ಲಿ ಯಾರೂ ಉತ್ತಮರೆನಿಸದಿದ್ದಲ್ಲಿ ನೋಟಾ ಎಂಬ ಹಕ್ಕಿನ ಮೂಲಕ ತಿರಸ್ಕರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವೆ ಎಂದು ಅರವಿಂದ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.