ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ತಮಗೆ ನೀಡಲಾಗುವ ರಜಾ ಪ್ರವಾಸದ ರಿಯಾಯಿತಿ (ಎಲ್ಟಿಸಿ) ಹಣ ದುರ್ಬಳಕೆ ಮಾಡುವುದು ಕಂಡು ಬಂದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎಚ್ಚರಿಕೆ ನೀಡಿದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೊಸ ಮಾರ್ಗಸೂಚಿ ಪ್ರಕಾರ, ಸರ್ಕಾರಿ ನೌಕರರು ತಮ್ಮ ಹಾಗೂ ಜೊತೆಗಿರುವ ಕುಟುಂಬ ಸದಸ್ಯರು ತಾವು ಉಲ್ಲೇಖಿಸಿದ ಸ್ಥಳಕ್ಕೆ ವಾಸ್ತವಾಗಿ ಭೇಟಿ ನೀಡಿರುವ ಬಗ್ಗೆ ಘೋಷಣಾ ಪತ್ರ ಸಲ್ಲಿಸಬೇಕು.
ಸರ್ಕಾರಿ ಉದ್ಯೋಗಿಗಳು ಎಲ್ಟಿಸಿ ಹೊಂದಿದಲ್ಲಿ ರಜೆಯ ಜೊತೆಗೆ ಪ್ರವಾಸ ಟಿಕೆಟ್ನ ರಿಯಾಯಿತಿ ಹಣ ನೀಡಲಾಗುತ್ತದೆ.
ಎಲ್ಟಿಸಿ ಮೂಲಕ ಪ್ರವಾಸ ಕೈಗೊಳ್ಳುವ ಸರ್ಕಾರಿ ನೌಕರರು ತಮ್ಮ ಘೋಷಣಾ ಪತ್ರದಲ್ಲಿ ತಾವು ಪ್ರಯಾಣಿಸಿದ ಸಮೀಪದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಿಂದ ಹಿಡಿದು ಮುಂದಿನ ಪ್ರಯಾಣದಲ್ಲಿ ಖಾಸಗಿ ಸಾರಿಗೆ ಅಥವಾ ಸ್ವಂತ ವ್ಯವಸ್ಥೆ ಮೂಲಕ ನಿರ್ದಿಷ್ಟ ಸ್ಥಳಕ್ಕೆ ಪ್ರಯಾಣಿಸಿದಲ್ಲಿ ಅದರ ಪೂರ್ಣ ವಿವರವನ್ನು ಘೋಷಣಾ ಪತ್ರದಲ್ಲಿ ತಿಳಿಸಬೇಕಿದೆ ಎಂದು ಇಲಾಖೆ ತಿಳಿಸಿದೆ.
ತಪ್ಪು ಮಾಹಿತಿ ದಾಖಲಿಸಿದ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳಿಗೆ ನೀಡಿದ ನಿರ್ದೇಶನದಲ್ಲಿ ತಿಳಿಸಿದೆ.
ಇತ್ತೀಚೆಗೆ ಕೆಲವು ಸರ್ಕಾರಿ ನೌಕರರು ಉಚಿತ ವಿಮಾನ ಬೋರ್ಡಿಂಗ್, ವಸತಿ, ಸಾರಿಗೆ ಮತ್ತು ನಗದು ಮರುಪಾವತಿಗಳ ಲಾಭ ಪಡೆಯಲು ರಹಸ್ಯವಾಗಿ ಏಜೆಂಟರ ಜೊತೆ ಕೈಜೋಡಿಸಿರುವುದು ಬೆಳಕಿಗೆ ಬಂದಿದ್ದು, ಕೇಂದ್ರ ಸರ್ಕಾರ ಇದರ ದುರುಪಯೋಗವನ್ನು ತಡೆಗಟ್ಟಲು ವ್ಯವಸ್ಥೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.