ಜೈಪುರ: ರಾಜಸ್ಥಾನದ ಇತಿಹಾಸದ ಪುಸ್ತಕಗಳಲ್ಲಿ ಅಸ್ತಿತ್ವದಲ್ಲಿರುವ 1576ರ ಹಲ್ದಿಘಾಟಿ ಯುದ್ಧದ ಫಲಿತಾಂಶವನ್ನು ಬದಲಿಸಲು ರಾಜ್ಯ ಶಿಕ್ಷಣ ಸಚಿವಾಲಯ ಬೆಂಬಲ ಪಡೆದಿದೆ.
ಈವರೆಗೆ ಪಠ್ಯಪುಸ್ತಕದಲ್ಲಿ ಇರುವಂತೆ ಹಲ್ದಿಘಾಟಿ ಯುದ್ಧದಲ್ಲಿ ಅಕ್ಬರನು ಮಹಾರಾಣಾ ಪ್ರತಾಪ್ ವಿರುದ್ಧ ವಿಜಯ ಸಾಧಿಸಿರುವುದು ಸೂಚಿಸಲಾಗಿದೆ. ಆದರೆ ವಾಸ್ತವವಾಗಿ ಈ ಯುದ್ಧದಲ್ಲಿ ಮಹಾರಾಣಾ ಪ್ರತಾಪ್ ಅಕ್ಬರನ ವಿರುದ್ಧ ಜಯ ಸಾಧಿಸಿದ್ದನು. ಮಹಾರಾಣಾ ಪ್ರತಾಪ್ಗೆ ಇತಿಹಾಸದ ಪುಸ್ತಕದಲ್ಲಿ ಗೌರವ, ಪ್ರಾಧಾನ್ಯತೆ ನೀಡಲಾಗಿಲ್ಲ ಎಂದು ಶಿಕ್ಷಣ ಸಚಿವ ವಾಸುದೇವ ದೇವಮನಿ ತಿಳಿಸಿದ್ದಾರೆ.
ಮಹಾರಾಣಾ ಪ್ರತಾಪ್ ಪರವಾಗಿ ಇತಿಹಾಸದ ತಿದ್ದುಪಡಿಗೆ ರಾಜಸ್ಥಾನ ಶಿಕ್ಷಣ ಸಚಿವಾಲಯ ಅಲ್ಲದೇ ಆರೋಗ್ಯ ಸಚಿವ ಕಾಲಿ ಚರಣ್ ಸರಫ್ ಅವರ ಬೆಂಬಲವೂ ದೊರೆತಿದೆ.
ಈ ಬಗ್ಗೆ ಬಿಜೆಪಿ ಶಾಸಕ ಮೋಹನ್ಲಾಲ್ ಗುಪ್ತಾ ರಾಜಸ್ಥಾನ ವಿಶ್ವವಿದ್ಯಾಲಯದ ಸಂಘಟನೆಗೆ ಪ್ರಸ್ತಾಪಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.