ಹರ್ಯಾಣಾ: ಭಾರತದ ಕರಕುಶಲ ಹಾಗೂ ಸಂಪ್ರದಾಯಗಳ ವಿಶಿಷ್ಟತೆಯನ್ನು ಸಾರುವ ಸೂರಜ್ಕುಂಡ ಕ್ರಾಫ್ಟ್ ಮೇಳದಲ್ಲಿ ಈ ಬಾರಿ ಅನೇಕ ವಿದೇಶಗಳೂ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕರಕುಶಲ ವಸ್ತು, ಕಲೆ ಹಾಗೂ ಆಹಾರಗಳ ಪ್ರದರ್ಶನಕ್ಕೆ ಸೂರಜ್ಕುಂಡ ಮೇಳ ಉತ್ತಮ ವೇದಿಕೆ. ದೇಶದ ಎಲ್ಲ ರಾಜ್ಯಗಳು ಹಾಗೂ ಅನ್ಯ ದೇಶಗಳೂ ಇದರಲ್ಲಿ ಪಾಲ್ಗೊಂಡಿವೆ. ಆದ್ದರಿಂದ ನಮ್ಮ ಸಾಂಪ್ರದಾಯಿಕ ಉಡುಗೆ, ತೊಡುಗೆ, ದೇಶಿ ಉತ್ಪನ್ನಗಳ ಪ್ರದರ್ಶನ ಹಾಗೂ ವಾಣಿಜ್ಯಿಕ ಲಾಭ ಪಡೆಯಲೂ ಈ ಮೇಳ ಸಹಕಾರಿಯಾಗಿದೆ ಎಂದು ಅಸ್ಸಾಂ ಮಳಿಗೆಯ ಜಿತೇನ್ ಬೋರಾ ಹೇಳಿದ್ದಾರೆ.
2013 ರಲ್ಲಿ ಈ ಮೇಳವು ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿತು. ಸಾರ್ಕ್ ಹಾಗೂ ಯುರೋಪಿಯನ್ ರಾಷ್ಟ್ರಗಳೂ ಸೇರಿದಂತೆ ಅಂದಾಜು 20ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಪಾಲ್ಗೊಂಡಿವೆ.
ಅಪ್ಘಾನಿಸ್ಥಾನದಿಂದ ಇಶಾಕ್, ಅಫ್ಘಾನಿ ಕಾರ್ಪೆಟ್ಗಳನ್ನು ತಂದಿದ್ದಾರೆ. ಸೂರಜ್ಕುಂಡ ಮೇಳದಲ್ಲಿ ಇವರು 4 ವರ್ಷಗಳಿಂದ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದು, ಭಾರತದಲ್ಲಿ ವ್ಯಾಪಾರ ಮಾಡುವುದು ಇವರಿಗೆ ಹೆಚ್ಚು ಪ್ರೀತಿಯಂತೆ.
ವ್ಯಾಪಾರಿಗಳಾಗಿ ನಾವು ದೇಶದ ಅನೇಕ ರಾಜ್ಯಗಳಲ್ಲಿ ನಡೆಯುವ ಮೇಳಗಳಲ್ಲಿ ಭಾಗವಹಿಸುತ್ತೇವೆ. ಆದರೆ ಸೂರಜ್ಕುಂಡ್ ಮೇಳವು ಎಲ್ಲಕ್ಕಿಂತಲೂ ವಿಭಿನ್ನ. ಭಾರತ ಸರ್ಕಾರ ನಮ್ಮನ್ನು ಈ ಮೇಳಕ್ಕೆ ಆಹ್ವಾನಿಸುತ್ತದೆ. ನಾವಿಲ್ಲಿ ಅತಿಥಿಗಳಿದ್ದಂತೆ. ನಮಗೆ ಸಾಕಷ್ಟು ಆದರಗಳನ್ನು ಮಾಡಲಾಗುತ್ತದೆ ಅಲ್ಲದೇ ವ್ಯಾಪಾರಕ್ಕಾಗಿ ಸಾಕಷ್ಟು ಮಳಿಗೆಗಳನ್ನು ಕಲ್ಪಿಸಲಾಗುತ್ತದೆ. ಇಲ್ಲಿಯ ಜನರ ಪ್ರೀತಿಯನ್ನು ಎಂದಿಗೂ ಮರೆಯುವಂತಿಲ್ಲ ಎಂದು ಇಶಾಕ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತವೇಕೆ ಬಹುಶಃ ವಿಶ್ವದಲ್ಲಿಯೇ ಇದೊಂದು ಬೃಹತ್ ಮೇಳವಾಗಿದೆ. ಈ ಬಾರಿ ಶ್ರೀಲಂಕಾದ 11 ಜನ ಕರಕುಶಲಕಾರರು ಮೇಳದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.