ಗಾಂಧಿನಗರ: ಗುಜರಾತ್ನ ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ಪೃಥ್ವಿಪಾಲ್ ಪಾಂಡೆ ಅವರು ರಾಜ್ಯಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ನಕಲಿ ಎನ್ಕೌಂಟರ್ ಆರೋಪದ ಮೇಲೆ ಪಾಂಡೆ ಅವರು ಅಹಮದಾಬಾದ್ನ ಸಾಬರಮತಿ ಜೈಲಿನಲ್ಲಿದ್ದರು. ಅದೇ ಸಮಯವನ್ನು ಅವರು ಪಿಎಚ್ಡಿ ಪ್ರಬಂಧ ಸಂಶೋಧನೆಗೆ ಬಳಸಿಕೊಂಡದ್ದು ವಿಶೇಷ.
ಇಶ್ರಾಂತ್ ಜಹಾನ್ನ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಪಾಂಡೆ ಅವರಿಗೆ 2015 ರಲ್ಲಿ ಜಾಮೀನು ಸಿಕ್ಕ ನಂತರ ಮತ್ತೆ ಅವರು ಸೇವೆಗೆ ಸೇರಿದ್ದರು. ಎಂ.ಎಸ್.ಯುನಿವರ್ಸಿಟಿಯ ರಾಜ್ಯಶಾಸ್ತ್ರ ವಿಭಾಗದಲ್ಲಿ 2009 ರಲ್ಲಿಯೇ ಅವರು ಪಿಎಚ್ಡಿಗೆ ನೋಂದಣಿ ಮಾಡಿಸಿದ್ದರು.
‘The changing role and dynamics of the United Nations peace-keeping and peace-making operations after the Cold War’ ಎಂಬ ವಿಷಯದ ಮೇಲೆ ಪಾಂಡೆ ಅವರು ಪ್ರಬಂಧ ಮಂಡಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಆನಂದ ಮಾವ್ಳನ್ಕರ್ ಅವರು ಮಾರ್ಗದರ್ಶಕರಾಗಿದ್ದರು ಎಂದು ವಿಶ್ವವಿದ್ಯಾಲಯ ತಿಳಿಸಿದೆ.
2009 ರಲ್ಲಿಯೇ ನಾನು ಪಿಎಚ್ಡಿಗೆ ನೋಂದಣಿ ಮಾಡಿಸಿದ್ದೆ. ಆದರೆ ಕಳೆದ ವರ್ಷ ದೀಪಾವಳಿ ವೇಳೆ ನನ್ನ ಪ್ರಬಂಧವನ್ನು ಸಲ್ಲಿಸಲು ಸಾಧ್ಯವಾಯಿತು. ಪಿಎಚ್ಡಿ ಪೂರ್ಣಗೊಳಿಸಲು ಅಂದಾಜು 8 ವರ್ಷ ಬೇಕಾಯಿತು ಎಂದು ಪಾಂಡೆ ಹೇಳಿದ್ದಾರೆ.
ಜೈಲಿನಲ್ಲಿದ್ದ 18 ತಿಂಗಳು ನಾನು ನನ್ನ ಪಿಎಚ್ಡಿ ಪ್ರಬಂಧ ಸಿದ್ಧಪಡಿಸಲು ಅಮೂಲ್ಯ ಸಮಯ ದೊರಕಿತು. ಅದನ್ನು ನಾನು ಸದುಪಯೋಗಪಡಿಸಿಕೊಂಡೆ. ಇಲ್ಲದಿದ್ದರೆ ಸದಾ ಕಾರ್ಯದೊತ್ತಡ ಇರುವ ಪೊಲೀಸ್ ಇಲಾಖೆಯಲ್ಲಿದ್ದು ಪಿಎಚ್ಡಿ ಪಡೆಯುವುದು ಕಷ್ಟಸಾಧ್ಯ ಎಂದು ಅವರು ಹೇಳಿದ್ದಾರೆ.
1980 ಐಪಿಎಸ್ ಬ್ಯಾಚ್ನ ಪಾಂಡೆ ಅವರು, ಜೈಲಿನಲ್ಲಿದ್ದಾಗ ನನ್ನ ಪಿಎಚ್ಡಿ ಪ್ರಬಂಧಕ್ಕೆ ಪೂರಕ ಮಾಹಿತಿಗಳು, ಆಕರಗಳನ್ನು ಒಯ್ಯುವುದು ತುಂಬ ಕಷ್ಟದಾಯಕವಾಗಿತ್ತು ಎಂದು ಪಾಂಡೆ ಹೇಳಿದ್ದಾರೆ.
ಗುಜರಾತ್ನ ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ಅವರೂ ಕೂಡಾ ಇದೇ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.