ಮನೇಸರ್: ಪಠಾನ್ಕೋಟ್ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಇ. ಕುಮಾರ್ ಅವರಿಗೆ ಗೌರವ ಅರ್ಪಿಸುವ ಭಾಗವಾಗಿ ಮನೇಸರ್ನ ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ) ತರಬೇತಿ ಕೇಂದ್ರ ನಿರಂಜನ್ ಸಭಾಂಗಣ ನಿರ್ಮಿಸಿದೆ.
ಕೇಂದ್ರದ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಸಭಾಂಗಣವನ್ನು ಉದ್ಘಾಟಿಸಿದ್ದು, ಇಲ್ಲಿ 17ನೇ ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ವಿಚಾರ ಸಂಕಿರಣ ನಡೆಯಿತು.
ಸಭಾಂಗಣ ಉದ್ಘಾಟನೆ ವೇಳೆ ನಿರಂಜನ್ ಅವರ ಪೋಷಕರಾದ ಶಿವರಾಜನ್ ಇ. ಕುಮಾರ್, ರಾಧಾ ಶಿವರಾಜನ್ ಹಾಗೂ ನಿರಂಜನ್ ಅವರ ಸಹೋದರ, ವಿಂಗ್ ಕಮಾಂಡರ್ ಶರದ್ ಇ. ಕುಮಾರ್ ಉಪಸ್ಥಿತರಿದ್ದರು. ರಾಥೋಡ್ ಅವರ ನಿರಂಜನ್ ಅವರ ಪೋಷಕರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಈ ಸಭಾಂಗಣ ಯೋಧರಿಗೆ ನಿರಂಜನ್ ಅವರ ಸರ್ವೋಚ್ಚ ತ್ಯಾಗವನ್ನು ನೆನಪಿಸಲಿದೆ. ನಿರಂಜನ್ ಸಭಾಂಗಣ 390 ಆಸನಗಳ ಸಾಮರ್ಥರ್ಯವನ್ನು ಹೊಂದಿದ್ದು, 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಯೋಧರಿಗೆ ಗೌರವ ಅರ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕಟ್ಟಡಗಳನ್ನು ನಿರ್ಮಿಸುವ ಯೋಜನೆಯನ್ನು ಎನ್ಎಸ್ಜಿ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.