ನವದೆಹಲಿ: ದೇಶದ 6 ಕೋಟಿ ಗ್ರಾಮೀಣ ಕುಟುಂಬಗಳು ಡಿಜಿಟಲ್ ಸಾಕ್ಷರತೆ ಪಡೆಯಲು ‘ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ’ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗ್ರಾಮೀಣ ಭಾರತದ ಜನರು ಮಾರ್ಚ್, 2019ರ ಒಳಗಾಗಿ ಡಿಜಿಟಲ್ ಸಾಕ್ಷರತೆ ಹೊಂದಲು 2,351.38 ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯನ್ನು ರೂಪಿಸಲಾಗಿದೆ.
2016-17ನೇ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ.
ಈ ಯೋಜನೆ ವಿಶ್ವದಲ್ಲೇ ಅತಿ ದೊಡ್ಡ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮ ಎಂದು ಅಂದಾಜಿಸಲಾಗಿದ್ದು, ಆಥಿಕ ವರ್ಷ 2016-17ನೇ ಸಾಲಿನಲ್ಲಿ 25 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. 2017-18ನೇ ಆಥಿಧಕ ವರ್ಷದಲ್ಲಿ 275 ಲಕ್ಷ ಅಭ್ಯರ್ಥಿಗಳು ಹಾಗೂ 2018-19ನೇ ಆರ್ಥಿಕ ವರ್ಷದಲ್ಲಿ 300 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಲ್ಲಿ ಡಿಜಿಟಲ್ ಸಾಕ್ಷರತೆ ಖಚಿತಪಡಿಸಲು ಪ್ರತಿ 2,50,000 ಗ್ರಾಮ ಪಂಚಾಯತ್ಗಳು 200 ರಿಂದ 300 ಅಭ್ಯರ್ಥಿಗಳ ನೋದಣಿ ಮಾಡಲಿವೆ.
ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ರಾಜ್ಯ ಸಚಿವಾಲಯಗಳ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ.
ಡಿಜಿಟಲ್ ಸಾಕ್ಷರತೆ ಹೊಂದಿರುವ ಜನರು ಕಂಪ್ಯೂಟರ್, ಟಾಬ್ಲೆಟ್, ಸ್ಮಾರ್ಟ್ ಫೋನ್ಗಳನ್ನು ಬಳಸಬಹುದಾಗಿದೆ. ಇಮೇಲ್ ಸ್ವೀಕರಿಸುವುದು, ಇಂಟರ್ನೆಟ್ ಹುಡುಕಾಟ, ಸರ್ಕಾರಿ ಸೇವೆಗಳನ್ನು ಪಡೆಯುವುದು, ಮಾಹಿತಿಗಳ ಹುಡುಕಾಟ, ನಗದುರಹಿತ ವಹಿವಾಟುಗಳು ಮೊದಲಾದವು ಡಿಜಿಟಲ್ ವಹಿವಾಟಿನಡಿ ಬರುತ್ತದೆ. ದೇಶದ ಪ್ರತಿ ನಾಗರಿಕರೂ ಕಂಪ್ಯೂಟರ್, ಇಂಟರ್ನೆಟ್ನ್ನು ಸಕ್ರಿಯವಾಗಿ ಬಳಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂಬುದು ಕೇಂದ್ರದ ಯೋಚನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.