ಬೇತುಲ್: ಹಿಂದುತ್ವ ಎಂಬುದು ನಮ್ಮ ರಾಷ್ಟ್ರೀಯತೆ. ಭಾರತದಲ್ಲಿ ಜನಿಸಿದ ಎಲ್ಲರೂ ಹಿಂದುಗಳೇ. ಅಲ್ಲದೇ ಭಾರತದಲ್ಲಿ ಜನಿಸಿದ ಮುಸ್ಲಿಮರು ರಾಷ್ಟ್ರೀಯತೆ ವಿಷಯ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಹಿಂದೂಸ್ಥಾನದಲ್ಲಿ ವಾಸ ಮಾಡುವ ಎಲ್ಲ ಜನರು ಮತ್ತು ಹಿಂದೂ ಸಂಸ್ಕೃತಿಯನ್ನು ಗೌರವಿಸುವ ಎಲ್ಲರೂ ಹಿಂದೂಗಳೇ. ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಭಿನ್ನವಾಗಿದೆ ಅಷ್ಟೇ ಎಂದು ಹೇಳಿದರು.
ವಿಶ್ವದೆಲ್ಲೆಡೆ ಭಾರತೀಯ ಸಮಾಜವನ್ನು ಹಿಂದೂ ಎಂದೇ ಪರಿಗಣಿಸಲಾಗುತ್ತದೆ. ಎಲ್ಲಾ ಭಾರತೀಯರು ಹಿಂದೂಗಳೇ ಹಾಗೂ ನಾವೆಲ್ಲರೂ ಒಂದೇ. ಹಿಂದೂಗಳು ದೇಶದ ಗೌರವ ಹಾಗೂ ಸಂಸ್ಕೃತಿಯನ್ನು ಬಹಳ ಜತನದಿಂದ ಕಾಯ್ದುಕೊಳ್ಳಬೇಕಿದೆ ಎಂದರು.
ನಮ್ಮ ಜಾತಿ, ಮತ, ಸಂಸ್ಕೃತಿ ಮತ್ತು ಭಾಷೆಗಳು ಭಿನ್ನತೆಗಳನ್ನು ಒಳಗೊಂಡಿರಬಹುದು. ಆದರೆ, ಹೃದಯದ ಭಾಷೆ ಒಂದೇ ಆಗಿರುತ್ತದೆ. ವಿವಿಧತೆಗಳು ಸುಂದರವಾಗಿರಬಹುದು. ಆದರೆ ಅದರಲ್ಲಿ ಏಕತೆ ಇರಬೇಕು ಎಂದು ಅವರು ಹೇಳಿದರು.
ವಿಶ್ವದ ಹೊರಗೆ ಏಕತೆ ಕಾಣಿಸುತ್ತಿರಬಹುದು. ಆದರೆ, ನಮ್ಮ ದೇಶದ ಒಳಗೆ ಏಕತೆ ಎಂಬುದು ಕ್ರಮೇಣ ಕುಂಠಿತಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.