ನವದೆಹಲಿ: ಪರಮಾಣು ಭಯೋತ್ಪಾದನೆ ಒಂದು ಜಾಗತಿಕ ಬೆದರಿಕೆಯಾಗಿದ್ದು, ಅದರ ಋಣಾತ್ಮಕ ಶಕ್ತಿಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಅದನ್ನು ರಾಷ್ಟ್ರೀಯ ಕಾರ್ಯತಂತ್ರಗಳಿಗೆ ಬಳಸಬಾರದು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜಯ್ಶಂಕರ್ ಹೇಳಿದ್ದಾರೆ.
ಪರಮಾಣು ಭಯೋತ್ಪಾದನೆ ನಿಗ್ರಹಿಸುವ ಜಾಗತಿಕ ಉಪಕ್ರಮಗಳನ್ನು ನಿರ್ಣಯಿಸುವ ಸಭೆಯಲ್ಲಿ ಮಾತನಾಡುತ್ತಿದ್ದ ಜಯ್ಶಂಕರ್, ಪರಮಾಣು ಶಕ್ತಿ ವಿಶೇಷ ಶಕ್ತಿಯನ್ನು ಹೊಂದಿದೆ ಮತ್ತು ಅದು ಮನುಕುಲಕ್ಕೆ ಹಲವು ರೀತಿಯ ಲಾಭವನ್ನು ನೀಡಿದೆ. ಪರಮಾಣು ಶಕ್ತಿಯನ್ನು ರೂಪಿಸಲು ವೈಜ್ಞಾನಿಕ ಸಮುದಾಯ ಕೂಡ ಪ್ರಮುಖ ಪಾತ್ರ ವಹಿಸಿದೆ. ಆದರೆ ಇದರ ನಕಾರಾತ್ಮಕ ಪರಿಣಾಮಗಳನ್ನು ಕಡೆಗಣಿಸುವಂತಿಲ್ಲ. ಇಡೀ ವಿಶ್ವವೇ ಇದರ ವಿನಾಶಕಾರಿ ಶಕ್ತಿಯನ್ನು ನೋಡಿದೆ ಎಂದು ಅವರು ಹೇಳಿದ್ದಾರೆ.
ವಿನಾಶಕಾರಿ ಪರಮಾಣು ಶಕ್ತಿಯ ಬಳಕೆ ಪುನರಾವರ್ತಿಸಲು ಸಾಧ್ಯವಿಲ್ಲ ಹಾಗೂ ಪರಮಾಣು ಶಸ್ತ್ರಾಸ್ತ್ರಳನ್ನು ಹೊಂದಿದ ರಾಷ್ಟ್ರಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದಿರಲು ಸಾಧ್ಯವಿಲ್ಲ. ಸಮಗ್ರ ಜಾಗತಿಕ ಪ್ರತಿಕ್ರಿಯೆಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಪರಮಾಣು ಭದ್ರತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.