ನವದೆಹಲಿ: ಜೆಎನ್ಯು ಪ್ರೊ.ನಿವೇದಿತಾ ಮೆನನ್ ಅವರು, ಕಾಶ್ಮೀರ ಭಾರತದ್ದಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಕಚೇರಿಗೆ ಹೋಗದಂತೆ ಪ್ರೊಫೆಸರ್ ಮಕರಂದ ಪರಾಂಜಪೆ ಅವರನ್ನು ವಿದ್ಯಾರ್ಥಿಗಳು ತಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿ, ಏಕವಚನದಿಂದ ಅವರನ್ನು ಸಂಬೋಧಿಸಿದ ಘಟನೆ ಜೆಎನ್ಯುನಲ್ಲಿ ಸೋಮವಾರ ನಡೆದಿದೆ.
ಜವಾಹರಲಾಲ್ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಹಿರಿಯ ಪ್ರೊಫೆಸರ್ ಮಕರಂದ ಪರಾಂಜಪೆ ಅವರೇ ಸ್ವತಃ ತಮ್ಮ ಫೇಸ್ಬುಕ್ ಗೋಡೆಯಲ್ಲಿ ಈ ಕುರಿತು ಹೇಳಿಕೊಂಡಿದ್ದು, ಒಂದು ವಿಡಿಯೊ ಕ್ಲಿಪ್ ಕೂಡಾ ಪೋಸ್ಟ್ ಮಾಡಿದ್ದಾರೆ. ಈ ಕೆಳಗಿನಂತೆ ಪ್ರೊ.ಪರಾಂಜಪೆ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಘಟನೆ ಕುರಿತು ಬರೆದುಕೊಂಡಿದ್ದಾರೆ.
ಅವರು ಸತ್ಯಾಗ್ರಹ ಕೂಡುವುದಾಗಿ ಹೇಳಿದ್ದಲ್ಲದೇ, ವಿದ್ಯಾರ್ಥಿಗಳ ಪಾದ ಮುಟ್ಟಲೂ ಮುಂದಾಗಿದ್ದರು. ಈ ಕುರಿತು ಅವರು ಟ್ವಿಟರ್ನಲ್ಲಿಯೂ ಹೇಳಿಕೊಂಡಿದ್ದು, ಒಂದೊಳ್ಳೆ ಕಾರಣಕ್ಕಾಗಿ, ಒಂದೊಳ್ಳೆ ಬದಲಾವಣೆಗಾಗಿ ವಿದ್ಯಾರ್ಥಿಗಳ ಪಾದ ಮುಟ್ಟಿದರೆ ತಪ್ಪೇನು ಎಂದು ಕೇಳಿದ್ದಾರೆ ಪ್ರೊ.ಮಕರಂದ ಅವರು.
ಓರ್ವ ಹಿರಿಯ ಪ್ರೊಫೆಸರ್ ಅವರಿಗೆ ಈ ರೀತಿ ವಿದ್ಯಾರ್ಥಿಗಳು ತೊಂದರೆ ಕೊಟ್ಟದ್ದಕ್ಕೆ ಅವರು ನಂಬಿದ ಸಾಮಾಜಿಕ ನ್ಯಾಯದ ಸಿದ್ಧಾಂತವೇ ಕಾರಣವೆಂದು ಹೇಳಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧದ ತಮ್ಮ ನಿಲುವನ್ನು ವಿದ್ಯಾರ್ಥಿಗಳು ಈ ಪ್ರದರ್ಶಿಸಿದ್ದಾಗಿ ಅವರು ತಿಳಿಸಿದ್ದಾರೆ.
ನೇರ, ನಿಷ್ಠುರ ಹಾಗೂ ಯಾವುದೇ ಇಸಂಗಳಿಗೆ ಕಟ್ಟುಬೀಳದೇ ಸಾಮಾಜಿಕ ನ್ಯಾಯದ ಬೆನ್ನುಹತ್ತಿರುವ ಪ್ರೊ.ಮಕರಂದ ಪರಾಂಜಪೆ ಅವರೊಂದಿಗೆ ಜೆಎನ್ಯು ವಿದ್ಯಾರ್ಥಿಗಳು ನಡೆದುಕೊಂಡ ರೀತಿ ಬರೀ ಖಂಡನೀಯವಲ್ಲ, ಜೆಎನ್ಯು ಅಂಗಳದಲ್ಲಿ ತಯಾರಾಗುತ್ತಿರುವ ಅಪಾಯಕಾರಿ ಭವಿಷ್ಯದ ಪ್ರತೀಕ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.