ಶ್ರೀನಗರ: ಪ್ರಯಾಣ ಯೋಜನೆ, ಪಾರ್ಟಿಗಳ ಆಯೋಜನೆ ಮುಂತಾದ ವಿಚಾರಗಳ ಬಗ್ಗೆ ಜಮ್ಮು-ಕಾಶ್ಮೀರದ ಕಣಿವೆ ಪ್ರದೇಶದ ಜನರ ಕರೆಗಳಿಗೆ ಸ್ಪಂದಿಸುವ ಸೋನಮ್ ಲೋಟಸ್ ಈಗ ಕಣಿವೆಯಲ್ಲಿ ‘ಸಂತ’ ಖ್ಯಾತಿಯನ್ನು ಪಡೆದಿದ್ದಾರೆ.
ವಿಮಾನ ಟಿಕೆಟ್ ಮಾಡುವುದರಿಂದ ಹಿಡಿದು ಮನೆಗೆ ಅತಿಥಿಗಳನ್ನು ಕರೆಯಿಸಿಕೊಳ್ಳುವವರೆಗೆ ಜನರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಕಣಿವೆ ರಾಜ್ಯದ ಹವಾಮಾನ ಇಲಾಖೆಯ ನಿರ್ದೇಶಕ ಲೋಟಸ್ ಎಂದೂ ಜನರಲ್ಲಿ ನಿರಾಶೆ ಮೂಡಿಸಿಲ್ಲ.
ಶೀತ ಹವಾಮಾನ, ಆರ್ಥಿಕ ನಷ್ಟ, ಅಪಘಾತಗಳಿಗೆ ಕಾರಣವಾಗಿರುವ ಈ ಪ್ರದೇಶದಲ್ಲಿ ಲೋಟಸ್ ಅವರ ಹವಾಮಾನ ಮುನ್ಸೂಚನೆ ಒಂದು ವಿಶೇಷ ಅರ್ಥವನ್ನು ನೀಡಿದೆ. ಒಂದು ಸಾಂಸ್ಕೃತಿಕ ಸ್ಥಾನಮಾನ ಪಡೆದಿರುವ ಇವರಿಗೆ ಪ್ರಮುಖ ದೈನಂದಿನ ಪತ್ರಿಕೆಯೊಂದು ‘ಪೀರ್ (ಸಂತ) ಲೋಟಸ್’ ಎಂದು ಬಣ್ಣಿಸಿದೆ.
ಜನರಿಗೆ ನನ್ನ ಮೇಲೆ ನಂಬಿಕೆ ಇರುವುದರಿಂದ ಅವರು ನನಗೆ ಕರೆ ಮಾಡುತ್ತಾರೆ. ನನಗೆ ಅವರ ಜೊತೆ ಫೋನ್ನಲ್ಲಿ ಕೆಲವು ಪದಗಳನ್ನು ಮಾತನಾಡಬೇಕು ಅಷ್ಟೆ. ಅದು ಅವರಿಗೆ ತೊಂದರೆಯಿಂದ ರಕ್ಷಿಸಬಹುದು’ ಎಂದು ಲೋಟಸ್ ಹೇಳಿದ್ದಾರೆ.
ಸೋನಮ್ ಲೋಟಸ್, ಪ್ರಖ್ಯಾತ ಹವಾಮಾನ ತಜ್ಞ ಹಲವಾರು ಜನರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೊಬ್ಬ ಸಾಮಾನ್ಯ ವ್ಯಕ್ತಿಯ ಹೀರೋ ಎಂದು ರಾಜ್ಯ ಮಾಹಿತಿ ನಿರ್ದೇಶಕ ಶಾಹಿದ್ ಚೌಧರಿ ಟ್ವೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.