ನವದೆಹಲಿ: ಸಮಾಜವಾದಿ ಪಕ್ಷ ಕಾಂಗ್ರೆಸ್ ಜೊತೆ ಕೈಜೋಡಿಸಿರುವುದು ಮತದಾರರಲ್ಲಿ ವಿಶ್ವಾಸವನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ. ಆ ಮೂಲಕ ಅದು ವಿಧಾನಸಭಾ ಚುನಾವಣೆಗೂ ಮುನ್ನ ಸೋಲೊಪ್ಪಿಕೊಂಡಿರುವುದು ಸ್ಪಷ್ಟವಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸಮಾಜವಾದಿ ಪಕ್ಷ ತನ್ನ ಚಿಹ್ನೆಯಾಗಿರುವ ಸೈಕಲ್ನ್ನು ಮುಲಾಯಂ ಸಿಂಗ್ರಿಂದ ಕಸಿದು ಅದರ ಹ್ಯಾಂಡಲ್ನ್ನು ಕಾಂಗ್ರೆಸ್ ಕೈಗೆ ನೀಡಿದೆ. ದೇಶದ ಸರ್ವನಾಶಕ್ಕೆ ಕಾರಣವಾದ ಕಾಂಗ್ರೆಸ್ನ ಜೊತೆ ಸಮಾಜವಾದಿ ಪಕ್ಷ ಕೈಜೋಡಿಸಿದ್ದು, ಯುಪಿಎ ಆಡಳಿತದ ಸಂದರ್ಭ ಎರಡು ಪಕ್ಷಗಳ ಅಶಿಸ್ತಿನ ಮೈತ್ರಿ ದೇಶವನ್ನು ತೊಂದರೆಗೆ ಸಿಲುಕಿಸಿತ್ತು ಎಂದು ಹೇಳಿದ್ದಾರೆ.
ರಾಜಕಾರಣಿಗಳು ಜಿಲ್ಲಾಧಿಕಾರಿಗಳ ದುರ್ಬಳಕೆ ಮಾಡುತ್ತಿದ್ದು, ಚುನಾವಣೆಗಳ ಸುಗಮ ನಡವಳಿಕೆಗೆ ಒಂದೇ ಕಡೆ ನಾಲ್ಕೈದು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ನಾಯ್ಡು ಹೇಳಿದ್ದಾರೆ.
ಭ್ರಷ್ಟಾಚಾರ, ಅರಾಜಕತೆ, ಯಾವುದೇ ಅಭಿವೃದ್ಧಿ ಕಾಣದ ಕಾರಣ ರಾಜ್ಯದ ಜನತೆ ಕೂಡ ಸಮಾಜವಾದಿ ಪಪಕ್ಷವನ್ನು ಬಯಸುತ್ತಿಲ್ಲ ಎಂದು ನಾಯ್ಡು ಅವರು ಚುನಾವಣಾಧಿಕಾರಿ ನಸಿಮ್ ಜೈದಿ ಅವರನ್ನು ಭೇಟಿ ಮಾಡದಿದ ಬಳಿಕ ಹೇಳಿದ್ದಾರೆ.
ಚುನಾವಣಾ ನೀತಿ ಉಲ್ಲಂಘಿಸಿದಕ್ಕಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಎಡಿಜಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.