ನವದೆಹಲಿ: ಸೆಪ್ಟೆಂಬರ್ 18ರ ಉರಿ ದಾಳಿ ನಂತರ ಭಾರತೀಯ ಸೇನೆಯನ್ನು ಸನ್ನದ್ಧವಾಗಿಡಲು ಹಾಗೂ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಸಜ್ಜುಗೊಳಿಸುವ ನಿಟ್ಟಿನನಲ್ಲಿ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಸಲು ಮುಂದಾಗಿದೆ.
ಆಂಗ್ಲ ಪತ್ರಿಕೆಯೊಂದರ ವರದಿ ಪ್ರಕಾರ, ಕೇಂದ್ರ್ ಸರ್ಕಾರ 20 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಯುದ್ಧ ಟ್ಯಾಂಕರ್ಗಳು, ಸೈನಿಕರ (ಪದಾತಿ ದಳ) ಶಸ್ತ್ರಾಸ್ತ್ರ ಮತ್ತು ಯುದ್ಧ ನೌಕೆಗಳ ಖರೀದಿಗೆ ಮೂರು ತಿಂಗಳುಗಳಲ್ಲಿ ರಷ್ಯಾ, ಇಸ್ರೇಲ್, ಫ್ರಾನ್ಸ್ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಮತ್ತು ಸೆಪ್ಟೆಂಬರ್ ೨೯ರಂದು ಪಾಕಿಸ್ಥಾನದ ಲಾಂಚ್ಪ್ಯಾಡ್ಗಳ ಮೇಲೆ ಸರ್ಜಿಕಲ್ ದಾಳಿ ನಂತರ ಸರ್ಕಾರ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆ ಉಪಮುಖ್ಯಸ್ಥರಿಗೆ ಹಣಕಾಸು ಅಧಿಕಾರ ನೀಡುವ ಮೂಲಕ ಶಸ್ತ್ರಾಸ್ತ್ರ ಖರೀದಿ ಮತ್ತು ದಾಸ್ತಾನಿಗೆ ತುರ್ತು ಹಣಕಾಸು ಅಗತ್ಯತೆ ಪೂರೈಸಲು ಅನುಮತಿ ನೀಡಿತ್ತು.
2017-18ರ ಬಜೆಟ್ನಲ್ಲಿ ಆಧುನಿಕ ಮಿಲಿಟರಿ ಯೋಜನೆಗಳಿಗೆ 86,488 ಮೀಸಲಿಡಲಾಗಿದೆ. ಇದರ ಹೊರತಾಗಿ ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತೀಯ ವಾಯುಪಡೆ 9,200 ಕೋಟಿ ರೂ. ವೆಚ್ಚದ 43 ಒಪ್ಪಂದಗಳನ್ನು ಮಾಡಿಕೊಂಡಿದ್ದು, ಇದು ಸುಖೋಯ್-30 ಎಂಕೆಐ, ಮಿರೇಜ್-2000, ಎಂಐಜಿ-29, ಸಾಗಣೆ ವಿಮಾನಗಳು ಒಳಗೊಂಡಿವೆ. ಭಾರತದ ಭೂಸೇನೆ ರಷ್ಯಾದ ಕಂಪೆನಿಗಳ ಜೊತೆ 5,800 ಕೋಟಿ ರೂ. ವೆಚ್ಚದ 10 ಒಪ್ಪಂದಗಳನ್ನು ಮಾಡಿಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.