ಮೀರತ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಈ ಬಾರಿ ಸ್ಕಾಮ್ (ಸ್ಕ್ಯಾಮ್ ಎಂದರೆ ಕನ್ನಡದಲ್ಲಿ ಹಗರಣ) ವಿರುದ್ಧ ಹೋರಾಡುತ್ತದೆ. ಸ್ಕಾಮ್ ಎಂದರೇನು ಎಂದು ವಿಸ್ತರಿಸಿ ಹೇಳಿದ ಪ್ರಧಾನಿ ಎಸ್-ಸಮಾಜವಾದಿ, ಸಿ-ಕಾಂಗ್ರೆಸ್, ಎ-ಅಖಿಲೇಶ್ ಯಾದವ್, ಎಮ್-ಮಾಯಾವತಿ ಅವರ ವಿರುದ್ಧ ಎಂದು ಅವರು ವಿಭಿನ್ನವಾಗಿ ವ್ಯಾಖ್ಯಾನಿಸಿದರು.
ಉತ್ತರ ಪ್ರದೇಶದ ಮೀರತ್ ನಲ್ಲಿ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿ, ಉತ್ತರ ಪ್ರದೇಶ ಜನರಲ್ಲಿ ನಿಮಗೆ ಸ್ಕ್ಯಾಮ್ ಬೇಕೆ ಅಥವಾ ಬಿಜೆಪಿಯೇ ನೀವು ಆಯ್ಕೆ ಮಾಡಿಕೊಳ್ಳಿ. ಬಿಜೆಪಿಯ ಹೋರಾಟ ಸ್ಕಾಮ್ ವಿರುದ್ಧ ಎಂದು ಹೇಳಿದರು.
ಉತ್ತರ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಅನುದಾನ ಕಳುಹಿಸುತ್ತದೆ, ಆದರೆ ಅದನ್ನು ಸಮಾಜವಾದಿ ಪಕ್ಷ, ರಾಜ್ಯ ಸರ್ಕಾರ ಸರಿಯಾಗಿ ಬಳಸುತ್ತಿಲ್ಲ. ಹಣ ಬೇರೆಲ್ಲಿಯೋ ಹೋಗುತ್ತದೆ ಎಂದು ಆರೋಪಿಸಿದರು.
ಆರೋಗ್ಯ ಸುಧಾರಣೆಗೆ ಸಹಾಯವಾಗುವಂತೆ ಬಡವರ ಉದ್ಧಾರಕ್ಕಾಗಿ ನೀಡಿದ ಹಣ ಸದ್ಬಳಕೆಯಾಗಿಲ್ಲ ಎಂದು ಆರೋಪಿಸಿದ ಮೋದಿ ಅವರು, ಕೇಂದ್ರದಿಂದ ಅನುದಾನ ದೊರೆತರೂ ರಾಜ್ಯ ಸರ್ಕಾರಕ್ಕೆ ಅದನ್ನು ಬಳಸುವ ಅಥವಾ ರಾಜ್ಯದ ಏಳಿಗೆಗಾಗಿ ಶ್ರಮಿಸುವ ಯಾವುದೇ ಉದ್ದೇಶವಿಲ್ಲ ಎಂದು ಟೀಕಿಸಿದ್ದಾರೆ.
ಸೀಮಿತ ದಾಳಿಯ ಬಗ್ಗೆ ಮಾತನಾಡಿದ ಅವರು, ನಮ್ಮ ಸೈನಿಕರು ಹೇಗೆ ಪಾಕಿಸ್ಥಾನದ ಗಡಿದಾಟಿ ಉಗ್ರರನ್ನು ಸದೆಬಡಿದಿದ್ದರು ಮತ್ತು ಆಗ ನಮ್ಮ ದೇಶದ ಯಾವೊಬ್ಬ ಸೈನಿಕನೂ ಹತನಾಗಿರಲಿಲ್ಲ ಎಂಬುದು ದೇಶದ ಜನತೆಗೆ ಗೊತ್ತಿದೆ. ಕೆಲವು ಪಕ್ಷಗಳು ದೇಶದಲ್ಲಿ ನೋಟು ರದ್ದತಿ ಕ್ರಮದ ಬಳಿಕ ತಮ್ಮ ಅಕ್ರಮ ಸಂಪತ್ತನ್ನು ಕಳೆದುಕೊಂಡು ಗೊಂದಲಕ್ಕೊಳಗಾಗಿವೆ ಎಂದು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವನ್ನು ಕುರಿತು ವ್ಯಂಗ್ಯವಾಡಿದರು.
ಮೀರತ್ ದೇಶದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳನ್ನು ಕಂಡ ನಾಡು. ಆದರೆ ಇಂದು ಇಲ್ಲಿ ಕೊಲೆ, ಸುಲಿಗೆ ನಡೆಯುತ್ತಿವೆ. ಹಿಂದೆ ಸಮಾಜವಾದಿ ಪಕ್ಷವನ್ನು ರಾಜ್ಯವನ್ನು ನಾಶಪಡಿಸಿದವರು ಎಂದು ಟೀಕಿಸಿದ ಕಾಂಗ್ರೆಸ್ ಇಂದು ಅದೇ ಪಕ್ಷದೊಂದಿಗೆ ಕೈ ಜೋಡಿಸಿದೆ. ಹಾಗಾದರೆ ಅದಕ್ಕೆ ನೈತಿಕತೆ ಎಲ್ಲಿದೆ ಎಂದು ಪ್ರಧಾನಿ ಪ್ರಶ್ನಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.