ನವದೆಹಲಿ: ಪ್ರಮುಖವಾಗಿ 10 ವಿಷಯಗಳ ಮೇಲೆ ಪ್ರಸ್ತುತ ಬಜೆಟ್ ಕೇಂದ್ರಿಕೃತವಾಗಿದೆ ಎಂದ ವಿತ್ತ ಸಚಿವ ಅರುಣ್ ಜೇಟ್ಲಿ, ಜಗದ ಏಳ್ಗೆಗೆ ವಿಷ್ಣು ಧರಿಸಿದ ದಶಾವತಾರವನ್ನು ನೆನಪಿಸಿದ್ದಾರೆ.
ಕೆಲವು ವಿಧಾನಸಭೆ ಚುನಾವಣೆಗೂ ಮುನ್ನದ ಬಜೆಟ್, ರೈಲ್ವೆ ಬಜೆಟ್ನ್ನು ಒಳಗೊಂಡದ್ದು, ನೋಟು ಬ್ಯಾನ್ ನಂತರದ ಮೊದಲ ಬಜೆಟ್ ಹೀಗೆ ವಿಭಿನ್ನ ಕಾರಣಗಳಿಗಾಗಿ ಪ್ರಸ್ತುತ ಕೇಂದ್ರ ಸಾಮಾನ್ಯ ಬಜೆಟ್ ಕುತೂಹಲಕಾರಿಯಾಗಿತ್ತು.
ಬಹು ನಿರೀಕ್ಷಿತವಾಗಿದ್ದ ಈ ಬಜೆಟ್ನಲ್ಲಿ ಸಚಿವ ಅರುಣ್ ಜೇಟ್ಲಿ ಅವರು ಕೇಂದ್ರೀಕರಿಸಿದ 10 ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
1. ರೈತರ ಆದಾಯವನ್ನು 5 ವರ್ಷಗಳಲ್ಲಿ ದ್ವಿಗುಣಗೊಳಿಸುವುದು.
2. ಗ್ರಾಮೀಣ ಜನರಿಗೆ ಉದ್ಯೋಗ, ಮೂಲಭೂತ ಸೌಲಭ್ಯ ಕಲ್ಪಿಸುವುದು.
3. ಯುವಶಕ್ತಿ ಬಲವರ್ಧನೆಗೆ ವಿಶೇಷ ಆದ್ಯತೆ.
4. ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು.
5. ಜೀವನಮಟ್ಟ ಸುಧಾರಣೆಗೆ ಅಗತ್ಯ ಕ್ರಮ.
6. ಆರ್ಥಿಕ ಕ್ಷೇತ್ರದ ಪ್ರಗತಿ, ಸುಸ್ಥಿರ ಅಭಿವೃದ್ಧಿ ಸಾಧನೆಗೆ ಪರಿಶ್ರಮ.
7. ಡಿಜಿಟಲ್ ಆರ್ಥಿಕತೆ ಮೂಲಕ ಪಾರದರ್ಶಕತೆ ಹೆಚ್ಚಿಸುವುದು.
8. ಸಾರ್ವಜನಿಕ ಸೇವಾಕ್ಷೇತ್ರದಲ್ಲಿ ಜನರ ಸಹಭಾಗಿತ್ವಕ್ಕೆ ವಿಶೇಷ ಒತ್ತು.
9. ಸಂಪನ್ಮೂಲ ಸದ್ಬಳಕೆ ಮೂಲಕ ಆರ್ಥಿಕ ನಿರ್ವಹಣೆ.
10. ತೆರಿಗೆ ನಿರ್ವಹಣೆಯ ಪರಿಣಾಮಕಾರಿ ಕ್ರಮಗಳು.
ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಅವಶ್ಯಕ ಕ್ರಮ ಕೈಗೊಳ್ಳುವ ಮೂಲಕ ದೇಶದ ಪ್ರಗತಿಯನ್ನು ಸಾಧಿಸುವ ಕನಸು ಬಿತ್ತಿದ್ದು ವಿತ್ತ ಸಚಿವ ಅರುಣ ಜೇಟ್ಲಿ. ಇವುಗಳ ಜೊತೆಗೆ ಟೆಕ್ ಇಂಡಿಯಾ, ಯುವ ಸಮೂಹದ ಬಲವರ್ಧನೆ ಹಾಗೂ ಸ್ವಚ್ಛ ಭಾರತದ ಪರಿಕಲ್ಪನೆಯನ್ನೂ ಅವರು ತಮ್ಮ ಬಜೆಟ್ ಮೂಲಕ ಅನಾವರಣಗೊಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.