ಗಾಂಧಿನಗರ: ದೇಶದ ಆರ್ಥಿಕ ಸುಧಾರಣೆಗೆ ಸುಧಾರಣೆಗಳು ಅಗತ್ಯ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಗುಜರಾತ್ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಸಮ್ಮೇಳನದ ೮ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅರುಣ್ ಜೇಟ್ಲಿ ಅವರು ಭಾರತ ಈಗ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಟೇಬಲ್ ಸ್ವಚ್ಛಗೊಳಿಸುವ ಸಮಯ ಬಂದಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಭಾರತ ತೆರಿಗೆ ಅನುಸರಣೆ ರಹಿತ ಸಮಾಜವಾಗಿತ್ತು. ಅನಾಣ್ಯೀಕರಣವು ಬ್ಯಾಂಕಿಂಗ್ ವ್ಯವಹಾರಗಳೊಂದಿಗೆ ಹೆಚ್ಚಿನ ಅನುಸರಣೆಯ ಸಮಾಜದತ್ತ ಒಯ್ಯಲಿದೆ ಎಂದು ಹೇಳಿದ್ದಾರೆ.
ನಾವು ತೆರಿಗೆ ಅನುಸರಣೆ ಸಮಾಜದಲ್ಲಿದ್ದು, ನಮ್ಮ ತೆರಿಗೆಯ ಸಂಕುಚಿತತೆ ಅದರ ದಾಖಲೆಗಳ ಮೂಲಕ ತಿಳಿದುಕೊಳ್ಳಬಹುದು. ಔಪಚಾರಿಕ ವ್ಯವಹಾರಗಳು ಹೆಚ್ಚಿನ ಅನುಸರಣೆಯೊಂದಿಗೆ ಆದಾಯವನ್ನು ಹೆಚ್ಚಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಆರಂಭದಲ್ಲಿ ಕಠಿಣ ಹಂತಗಳ ಮೂಲಕ ಕಠಿಣ ನಿರ್ಧಾರಗಳು ಹಾದ ಹೋಗಬೇಕಾಗುತ್ತದೆ. ಕಾಗಗದ ಕರೆನ್ಸಿಗಳ ವಿಪರೀತ ಬಳಕೆ ತನ್ನದೇ ದುರ್ಗುಣಗಳನ್ನು ಹೊಂದಿದ್ದು, ಇದು ಸ್ವಂತ ಪ್ರಲೊಭಗಳಿಗೆ ಕಾರಣವಾಗುತ್ತವೆ ಎಂದು ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.