ತಿರುವನಂತಪುರಂ: ಕಳೆದ ಮೂರು ವರ್ಷಗಳಿಂದ ಪ್ರತಿದಿನ ಶಶಿ ಜಿ. ಅವರು ತಮ್ಮ ಮನೆಯ ಹೊರಗಿನ ರಸ್ತೆ ಅಗೆಯುತ್ತಿದ್ದಾರೆ. ತೆಂಗಿನ ಮರ ಹತ್ತುವ ಕೆಲಸ ಮಾಡುತ್ತಿದ್ದ ಮತ್ತು ಭಾಗಶಃ ಪಾರ್ಶ್ವವಾಯು ಆಗಿರುವ 59 ವರ್ಷದ ವ್ಯಕ್ತಿಗೆ ಇದು ಸಾಮಾನ್ಯ ಕೆಲಸವಲ್ಲ.
ತಿರುವನಂತಪುರಂನಲ್ಲಿ 18 ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಹಾಸಿಗೆ ಹಿಡಿದಿದ್ದ ಶಶಿ, ತಮ್ಮ ಬಲಗೈ ಮತ್ತು ಕಾಲುಗಳಿಗೆ ಪಾರ್ಶ್ವವಾಯುವಾಗಿರುವ ಕಾರಣ ಅವರು ನಿಧಾನವಾಗಿ ನಡೆಯಬಲ್ಲರು ಅಷ್ಟೇ.
ಶಶಿ ಅವರು ಸಣ್ಣ ವ್ಯಾಪಾರ ಪ್ರಾರಂಭಿಸುವ ಸಲುವಾಗಿ ಗ್ರಾಮ್ ಪಂಚಾಯತ್ಗೆ ತ್ರಿಚಕ್ರ ವಾಹನವನ್ನು ನೀಡಲು ಮನವಿ ಮಾಡಿದ್ದರು. ಆದರೆ ಸಿಟಿಯಿಂದ ಅವರ ಮನೆ ಸಮೀಪಕ್ಕೆ ಯಾವುದೇ ರಸ್ತೆಗಳಿಲ್ಲ, ಕೇವಲ ಒಂದು ಕಿರಿದಾದ ಕಾಲ್ದಾರಿ ಇದೆ. ನಿಮಗೆ ಪಾರ್ಶ್ವವಾಯು ಆಗಿರುವ ಕಾರಣ ನಿಮಗೆ ತ್ರಿಚಕ್ರ ವಾಹನ ನೀಡಲಾಗುವುದಿಲ್ಲ ಎಂದು ಪಂಚಾಯತ್ ಹೇಳಿತ್ತು. ತದನಂತರ ಶಶಿ ಅವರು ರಸ್ತೆ ನಿರ್ಮಿಸಲು ಪಂಚಾಯತ್ಗೆ ಅರ್ಜಿ ನೀಡಿದ್ದರು. ಆದರೆ ಶಶಿ ಅವರು ನೀಡಿದ ರಸ್ತೆ ಅರ್ಜಿಗೆ ಅವರ ಗ್ರಾಮದಲ್ಲಿ ಅಪಹಾಸ್ಯದ ನಗು ವ್ಯಕ್ತವಾಗಿತ್ತು.
ಇದರಿಂದ ಬೇಸರಗೊಂಡ ಶಶಿ ತಾನೇ ರಸ್ತೆ ಅಗೆಯಲು ನಿರ್ಧರಿಸಿದ್ದರು. ಹೀಗೆ 3 ವರ್ಷಗಳ ಹಿಂದೆ ರಸ್ತೆ ಅಗೆಯಲು ಪ್ರಾರಂಭಿಸಿದ್ದನ್ನು ನಿಲ್ಲಿಸಲೇ ಇಲ್ಲ. ದಿನದ 6 ಗಂಟೆಗಳ ಕಾಲ ತಮ್ಮ ಕೊಡಲಿಯಿಂದ ಎತ್ತರದ ಮೈದಾನವೊಂದನ್ನು ಅಗೆಯಲು ಆರಂಭಿಸಿದರು. ಅವರ ಈ ಅದ್ಭುತ ಮನೋಬಲದ ಪರಿಣಾಮವಾಗಿ ಸಣ್ಣ ವಾಹನಗಳು ಓಡಾಡುವಷ್ಟು ಸುಮಾರು 200 ಮೀಟರ್ ಅಗಲದ ಕಚ್ಚಾ ರಸ್ತೆ ತಯಾರಾಯಿತು.
’ಜನ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರೂ ನಾನು ನನ್ನ ಕೆಲಸ (ಅಗೆಯುವ) ಮಾಡುತ್ತ ಹೋದೆ ಮತ್ತು ಇದರಿಂದ ನನ್ನ ಚಿಕಿತ್ಸೆಗೆ, ವ್ಯಾಪಾರ ಆರಂಭಿಸಲು ಓಡಾಡಲು ಒಂದು ರಸ್ತೆ ಸಿಗಬಹುದು ಎಂಬುದು ನನ್ನ ವಿಶ್ವಾಸವಾಗಿತ್ತು.’ ಎಂದು ಶಶಿ ತಿಳಿಸಿದ್ದಾರೆ.
’ಪಂಚಾಯತ್ ನನಗೆ ತ್ರಿಚಕ್ರ ವಾಹನ ನೀಡದಿದ್ದರೂ, ಮುಂದಿನ ದಿನಗಳಲ್ಲಿ ಜನರಿಗೆ ಓಡಾಡಲು ಒಂದು ದಾರಿಯಾದರೂ ಆಗುತ್ತೆ’ ಎಂದು ಅವರು ಹೇಳಿದರು.
’ಅವರು ನಿರ್ಮಿಸಿದ ರಸ್ತೆಗೆ ನಾವು ಕೃತಜ್ಞರಾಗಿದ್ದೇವೆ, ಈಗ ಓಡಾಡಲು ತುಂಬ ಸುಲಭವಾಗಿದೆ ಮತ್ತು ರಸ್ತೆ ದಾಟಲು ದೊಡ್ಡ ಮೈದಾನ ಏರುವ ಅಗತ್ಯವಿಲ್ಲ. ಅವರು ಪ್ರತಿದಿನ ಅಗೆಯುತ್ತಿದ್ದನ್ನು ನೋಡಿ ಬಹಳ ಚಿಂತಿತಳಾಗುತ್ತಿದ್ದೆ, ಅದರೆ ಈಗ ನಾನು ಮೂಕವಿಸ್ಮಿತಳಾಗಿದ್ದೆನೆ’ ಎಂದು ಶಶಿ ನೆರೆಮನೆಯ ಸುಧಾ (52 ವರ್ಷ) ಹೇಳಿದ್ದಾರೆ.
ತಮ್ಮ ಕಥೆಯನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಶಶಿ ಮತ್ತು ಅವರ ಪತ್ನಿ ಕಣ್ಣೀರಿಟ್ಟರು. ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಾ ’ಈ ರೀತಿ ಅಗೆಯುವ ಕೆಲಸವನ್ನು ಮಾಡಬೇಡಿ, ನಾವು ಈಗಾಗಲೇ ಸಾಲದಲ್ಲಿದ್ದೇವೆ ಮತ್ತೆ ನಿಮಗೇನಾದರು ಆದರೆ ಚಿಕಿತ್ಸೆ ಪಡೆಯಲೂ ನಮ್ಮ ಬಳಿ ಹಣವಿಲ್ಲ’ ಎಂದು ಗೋಳಾಡಿದ್ದನ್ನು ನೆನಪಿಸಿ ಕಣ್ಣೀರಿಟ್ಟರು.
ಈ ಕುರಿತು ಪ್ರತಿಕ್ರಿಯಿಸಿದ ಶಶಿ ಒತ್ತಾಯಪೂರ್ವಕವಾಗಿ ನಗುತ್ತ, ’ಈ ರಸ್ತೆಯ ಕೆಲಸ ಮುಗಿಸಲು ನನಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕಾಗಬಹುದು. ಆದರೆ ಪಂಚಾಯತ್ ಇನ್ನೂ ನನ್ನ ತ್ರಿಚಕ್ರ ವಾಹನ ನೀಡಬೇಕಿದೆ’ ಎಂದು ಹೇಳಿದರು.
ಈಗ ಪ್ರತಿಯೊಬ್ಬರು ರಸ್ತೆ ನಿರ್ಮಿಸಿರುವುದರ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ನಮ್ಮ ಭವಿಷ್ಯಕ್ಕೆ ಏನು ? ಎಂದು ಅವರಿಬ್ಬರೂ ಪ್ರಶ್ನಾತೀತರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.