ನವದೆಹಲಿ: ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್ಸಿಟಿಸಿ) ವೇಗದ ಟಿಕೆಟ್ ಬುಕಿಂಗ್ಗಾಗಿ ಹೊಸ ಐಆರ್ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಬಿಡುಗಡೆ ಮಾಡಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಬುಧವಾರ ಈ ಆ್ಯಪ್ ಬಿಡುಗಡೆ ಮಾಡಿದ್ದು, ಪ್ರಸ್ತುತ ಇ-ಟಿಕೆಟಿಂಗ್ ವ್ಯವಸ್ಥೆ ಮೂಲಕ ಶೇ. 58ರಷ್ಟು ಕಾಯ್ದಿರಿಸಲಾದ ಪ್ರಯಾಣಿಕ ಟಿಕೆಟ್ ಸೇರಿ 10 ಲಕ್ಷ ಜನರು ಟಿಕೆಟ್ ಬುಕಿಂಗ್ ನಡೆಸುತ್ತಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ವ್ಯವಸ್ಥೆ ಸುಲಭಗೊಳಿಸಲು ಹೊಸ ಆಂಡ್ರಾಯ್ಡ್ ಆಧಾರಿತ ಟಿಕೆಟ್ ಬುಕಿಂಗ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಪ್ರಭು ಹೇಳಿದ್ದಾರೆ.
ಇದರ ಜೊತೆಗೆ ಪ್ರಭು ಅವರು ವಿವಿಧ ಶುಲ್ಕ ರಹಿತ ಉಪಕ್ರಮಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಐಆರ್ಸಿಟಿಸಿ ಆಪ್ಗೆ ಹೊಸ ವೈಶಿಷ್ಟ್ಯಗಳೊಂದಿಗೆ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ.
ಈ ವೈಶಿಷ್ಟ್ಯ 24/7 ಸೇವೆ, ಸರಳ ಮತ್ತು ಸುಲಭ ಯುಐ ಒಳಗೊಂಡಿದೆ. ಹೊಸ ಆ್ಯಪ್ ಐಆರ್ಸಿಟಿಸಿ ಇ-ವ್ಯಾಲೆಟ್ ಮತ್ತು ವೆಬ್ಸೈಟ್ ಜೊತೆ ಸೋಯೋಜಿಸಲಾಗಿದೆ ಎಂದು ಪ್ರಭು ತಿಳಿಸಿದ್ದಾರೆ.
ಹೊಸ ಬಳಕೆದಾರರ ನೋಂದಣಿ ಮತ್ತು ಆಕ್ಟಿವೇಶನ್ ಈ ಆ್ಯಪ್ ಮಲಕ ಸಾಧ್ಯವಾಗಲಿದ್ದು, ಇದು ಸಾಮಾನ್ಯ ಟಿಕೆಟ್, ಮಹಿಳಾ ಟಿಕೆಟ್, ತತ್ಕಾಲ್, ಪ್ರೀಮಿಯಂ ತತ್ಕಾಲ್ ಕೋಟಾ ಟಿಕೆಟ್ ಬುಕಿಂಗ್ಗೆ ಸಹಾಯಕವಾಗಲಿದೆ ಎಂದು ಪ್ರಭು ಹೇಳಿದ್ದಾರೆ.
ಈ ಆ್ಯಪ್ ಪ್ರತಿ ಬಾರಿ ಲಾಗಿನ್ ಆಗಲು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಹಾಕುವ ಬದಲು ಸ್ವಯಂ ನಿಗದಿಪಡಿಸಿದ ಪಿನ್ (ವೈಯಕ್ತಿಕ ಗುರುತಿನ ಸಂಖ್ಯೆ) ಭದ್ರತಾ ಲಕ್ಷಣಗಳ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.