ನವದೆಹಲಿ : ದೇಶದಾದ್ಯಂತ ಇಂದಿನಿಂದ 500 ನಗರಗಳಲ್ಲಿ ಸ್ವಚ್ಛ ಭಾರತ ಸಮೀಕ್ಷೆ ‘ಸ್ವಚ್ಛ ಸರ್ವೇಕ್ಷಣ್’ ಸಮೀಕ್ಷೆ ಪ್ರಾರಂಭವಾಗಲಿದೆ.
ಜನರಲ್ಲಿ ಶುಚಿತ್ವ, ಪರಿಸರ ನೈರ್ಮಲ್ಯ ಕಾಪಾಡುವ ಸಲುವಾಗಿ ಸ್ಪರ್ಧಾ ಮನೋಭಾವವನ್ನು ಮೂಡಿಸಲು ಕೇಂದ್ರ ಸರ್ಕಾರವು ಇಂದಿನಿಂದ ದೇಶದಾದ್ಯಂತ 500 ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯನ್ನು ಆರಂಭಿಸಲಿದೆ.
ನಗರದಲ್ಲಿನ ತ್ಯಾಜ್ಯ ಸಂಗ್ರಹ, ಬಯಲು ಶೌಚ ಮುಕ್ತ, ಉಚಿತ ಶೌಚಾಲಯ, ಘನ ತ್ಯಾಜ್ಯ ಪರಿಷ್ಕರಣೆ, ತ್ಯಾಜ್ಯಗಳ ವಿಲೇವಾರಿ, ಕಸ ಗುಡಿಸುವಿಕೆ, ಸ್ವಚ್ಛತೆಯ ಕುರಿತು ಮಾಹಿತಿ, ಶಿಕ್ಷಣದಿಂದ ವರ್ತನೆಯಲ್ಲಿ ಆದ ಬದಲಾವಣೆ ಕುರಿತಂತೆ ಹಲವು ವಿಷಯಗಳಲ್ಲಿ ನಗರವನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಈ ಎಲ್ಲಾ ವಿಷಯಗಳನ್ನು ಸ್ವಚ್ಛ ಭಾರತ್ ಮಿಷನ್ ಇ-ಲರ್ನಿಂಗ್ ಪೋರ್ಟಲ್ ಹೊಂದಿರುತ್ತದೆ.
ಕೌನ್ಸಿಲ್ ಆಫ್ ಇಂಡಿಯಾವು ಈ ಸಮೀಕ್ಷೆಯನ್ನು ನಡೆಸುತ್ತಿದ್ದು, ನಗರಪಾಲಿಕೆಗಳು ನೀಡುವ ಅಂಕಿ-ಅಂಶಗಳ ಆಧಾರದ ಮೇಲೆ ಮಂಡಳಿಯು ನಗರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಮಂಡಳಿಯ ಸದಸ್ಯರು ನಗರಗಳನ್ನು ವೀಕ್ಷಿಸಿ, ಅವರು ನೀಡುವ ಅಂಕಗಳು ಮತ್ತು ನಾಗರಿಕರ ಅಭಿಪ್ರಾಯಗಳನ್ನು ಪರಿಗಣಿಸಿ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ನಗರದಲ್ಲಿರುವ ನಾಗರಿಕರು 1969 ಸಂಖ್ಯೆಗೆ ಮಿಸ್ ಕಾಲ್ ನೀಡಿ ತಮ್ಮ ಸಲಹೆ, ಅಭಿಪ್ರಾಯಗಳನ್ನು ರೆಕಾರ್ಡ್ ಮಾಡಬಹುದು ಅಥವಾ ಸ್ವಚ್ಛ ಸರ್ವೇಕ್ಷಣ್ ವೆಬ್ಸೈಟ್ನಲ್ಲಿ ಇರುವ ಪ್ರತಿಕ್ರಿಯೆಗಳ ಅರ್ಜಿಯಲ್ಲಿ (Feedback form) ಅರ್ಜಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ತುಂಬಬಹುದು.
2016 ರ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆಯು ದೇಶದ 73 ನಗರಗಳಿಗೆ ರ್ಯಾಂಕ್ ನೀಡಿತ್ತು. ಈ ಸಮೀಕ್ಷೆಯಲ್ಲಿ ಸುಮಾರು 1 ಲಕ್ಷ ನಾಗರಿಕರು ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.