ಕೊಲ್ಕತ್ತಾ : ಜಾಧವಪುರ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದ ವಿದ್ಯಾರ್ಥಿ ನಿಲಂಬರ್ ಚಕ್ರವರ್ತಿ ಆಕ್ಷೇಪಾರ್ಹ ಚಿತ್ರವನ್ನು ಪೋಸ್ಟ್ ಮಾಡಿದ್ದು, ಇದೊಂದು ಎಡಪಂಥೀಯ ವಿಚಾರಧಾರೆಯುಳ್ಳವರ ಕೀಳುಮಟ್ಟದ ಕಾರ್ಯ ಎನ್ನಲಾಗಿದೆ.
ಏಸುವಿನ ತೊಡೆಯ ಮೇಲೆ ಕಾಳಿ ಮಾತಾ ಅಸಭ್ಯವಾಗಿ ಕುಳಿತುಕೊಂಡಿದ್ದು, ಹಿಂದೆ ಒಂದು ಕೈಯಲ್ಲಿ ಮದ್ಯ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡ ಬುದ್ಧನ ಚಿತ್ರವಿದೆ. ಇದನ್ನು ಪೋಸ್ಟ್ ಮಾಡಿದ ಮೇಲೆ ಚಕ್ರವರ್ತಿ ತನ್ನ ಫೇಸ್ಬುಕ್ ಅಕೌಂಟ್ ಡಿಆಕ್ಟಿವೇಟ್ ಮಾಡಿದ್ದಾನೆ. ಜಾಧವಪುರ ವಿಶ್ವವಿದ್ಯಾಲಯವು ಜೆಎನ್ಯುದಂತೆ ಹಿಂದು ಹಾಗೂ ರಾಷ್ಟ್ರೀಯತೆಯ ವಿರೋಧಿ ಎಂದೇ ಗುರುತಿಸಿಕೊಂಡಿದ್ದು ಗಮನಾರ್ಹ.
ಈ ರೀತಿಯ ಚಿತ್ರವು ಓರ್ವ ನಾಸ್ತಿಕ ಮನಸ್ಥಿತಿಯ ಸಂಕೇತ ಎಂದು ಕೆಲವರು ವಾದಿಸುತ್ತಾರೆ. ಆದರೆ, ಕೇವಲ ಮೂರೇ ಧರ್ಮಗಳ ಬಳಕೆ ಯಾಕೆ ? ಮುಸ್ಲಿಂ ಧರ್ಮವನ್ನೂ ಸೇರಿಸಬಹುದಿತ್ತಲ್ಲ ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಅದಕ್ಕೂ ಕಾರಣವಿದೆ. ಫ್ರೆಂಚ್ ಪತ್ರಿಕೆ ಚಾರ್ಲಿ ಹೆಬ್ಡೊ ಪ್ರವಾದಿ ಮೊಹಮ್ಮದರ ನಗ್ನ ಹಾಗೂ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ಪರಿಣಾಮ, ಉಗ್ರವಾದಿಗಳು ಪ್ರತೀಕಾರ ತೀರಿಸಿಕೊಂಡ ಘಟನೆಯನ್ನು ಚಕ್ರವರ್ತಿ ಹೇಗೆ ಮರೆಯಲು ಸಾಧ್ಯ?
ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸೂಕ್ತ ಸಂದೇಶ ಮುಟ್ಟಿಸುವ ಕಾರ್ಯ ಮಾಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.