ನವದೆಹಲಿ: ಬಡಜನರ ಆರ್ಥಿಕತೆಗೆ ಅಥವಾ ಜನ್-ಧನ್ ಖಾತೆಯನ್ನು ಬಳಸಿ ಕಪ್ಪು ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದ ಕಪ್ಪು ಹಣ ಠೇವಣಿದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ನಂತರ ಈ ಖಾತೆಗಳಲ್ಲಿ ಠೇವಣಿಯ ಪ್ರಮಾಣ ಕಡಿಮೆಯಾಗಿದೆ.
ಆದಾಯ ತೆರಿಗೆ ಇಲಾಖೆ ಭಾರೀ ಪ್ರಮಾಣದಲ್ಲಿ ಹೆಚ್ಚಿನ ಮೌಲ್ಯದ ಠೇವಣಿಗಳನ್ನು ಮಾಡಲಾಗುತ್ತಿದ್ದ ಸಮೂಹಗಳು ಮತ್ತು ಬ್ಯಾಂಕ್ ಶಾಖೆಗಳನ್ನು ಗುರುತಿಸಿದ್ದು, ಶೀಘ್ರದಲ್ಲೇ ಅವುಗಳ ತನಿಖೆ ನಡೆಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಜನ್-ಧನ್ ನಕ್ಷೆಯ ಸ್ಪಷ್ಟ ಚಿತ್ರಣ ಹೊಂದಿದೆ. ಇವು ಹೆಚ್ಚಿನ ಮೌಲ್ಯದ ಠೇವಣಿ ಮಾಡಲಾದ ಬ್ಯಾಂಕ್ ಶಾಖೆಗಳು ಮತ್ತು ಸಮೂಹಗಳಾಗಿವೆ. ಇವುಗಳ ದುರುಪಯೋಗದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾಗಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಒಟ್ಟು 25 ಕೋಟಿ ಜನ್-ಧನ್ ಖಾತೆಗಳು ಚಾಲ್ತಿಯಲ್ಲಿದ್ದು, 2014ರ ಆಗಸ್ಟ್ನಿಂದ ನ.8ರ ವರೆಗೆ ಇದರಲ್ಲಿ 46 ಸಾವಿರ ಕೋಟಿ ರೂ. ಠೇವಣಿಯಾಗಿದೆ. ಆದರೆ ನೋಟು ನಿಷೇಧದ 10 ದಿನದಲ್ಲಿ ಇದರಲ್ಲಿ 21 ಸಾವಿರ ಕೋಟಿ ರೂ. ಠೇವಣಿಯಾಗದೆ.
ಈ ಹಿಂದೆ ಚಾಲ್ತಿಯಲ್ಲಿ ಇಲ್ಲದ ಖಾತೆಗಳಲ್ಲಿ ಠೇವಣಿ ಮಾಡಿದಲ್ಲಿ ತೆರಿಗೆ ಇಲಾಖೆ ಪರಿಶೀಲನೆ ನಡೆಸಲಿದೆ. ತಮ್ಮ ಜನ್-ಧನ್ ಖಾತೆಗಳ ದುರ್ಬಳಕೆ ಮಾಡಿದವರ ವಿರುದ್ಧ ವಿಚಾರಣೆ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.