ಪೋರ್ಟ್ಬ್ಲೇರ್ : ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಹ್ಯಾವ್ಲಾಕ್ ದ್ವೀಪದಲ್ಲಿ ಸಿಲುಕಿರುವ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ರಕ್ಷಣಾ ಕಾರ್ಯಾಚರಣೆಗಾಗಿ ಎಲ್ಲಾ ಕ್ರಮ ಕೈಗೊಂಡಿದೆ. ಪ್ರವಾಸಿಗರ ಕುಟುಂಬಸ್ಥರಲ್ಲಿ ನನ್ನ ಮನವಿ ಏನೆಂದರೆ ನಿಮ್ಮವರ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಲೆಫ್ಟಿನೆಂಟ್ ಗವರ್ನರ್ ಡಾ. ಜಗದೀಶ್ ಮುಖಿ ಅವರೊಂದಿಗೆ ಮಾತನಾಡಿದ್ದೇನೆ. ಹ್ಯಾವ್ಲಾಕ್ ದ್ವೀಪಗಳಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
I appeal to the family members of stranded tourists that they should not panic as everyone in the Havelock Islands are reported to be safe.
— Rajnath Singh (@rajnathsingh) December 8, 2016
The government will launch the rescue operations immediately after the intensity of the cyclone reduces. The teams are ready in Port Blair.
— Rajnath Singh (@rajnathsingh) December 8, 2016
All the tourists who are stranded in Havelock Island are safe. The government has made all the preparations to evacuate them.
— Rajnath Singh (@rajnathsingh) December 8, 2016
Spoke to Lieutenant Governor of Andaman and Nicobar Islands, Dr. Jagdish Mukhi who apprised me of the situation in Havelock Islands.
— Rajnath Singh (@rajnathsingh) December 8, 2016
ನೌಕಾದಳದ 4 ನೌಕೆಗಳು ರಕ್ಷಣೆಗೆ ತೆರಳಲಿವೆ. ಸದ್ಯಕ್ಕೆ ಅಂಡಮಾನ್ ದ್ವೀಪದಲ್ಲಿ ಚಂಡಮಾರುತದ ಪ್ರಭಾಗ ಕಡಿಮೆ ಆಗಿದ್ದು, ಪೋರ್ಟ್ಬ್ಲೇರ್ನಲ್ಲಿ ನೌಕೆಗಳು ಸಿದ್ಧವಿದೆ. ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ಸಿಲುಕಿರುವ ಎಲ್ಲರನ್ನೂ ಸುರಕ್ಷಿತ ಸ್ಥಳಕ್ಕೆ ಶೀಘ್ರದಲ್ಲೇ ಕರೆತರಲಾಗುವುದು ಎಂದು ಹೇಳಿದ್ದಾರೆ.
ಅಂಡಮಾನ್ ದ್ವೀಪದಲ್ಲಿ ಸತತ ಮಳೆಯಿಂದಾಗಿ ದ್ವೀಪ ಸಮೂಹ ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಿಗೆ ಪ್ರವಾಸಕ್ಕೆಂದು ತೆರಳಿದ್ದು ಸುಮಾರು 1400 ಕ್ಕೂ ಹೆಚ್ಚು ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿದ್ದರು. ಸ್ಥಳೀಯ ಆಡಳಿತ ಮಂಡಳಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ ತಕ್ಷಣವೇ ಪ್ರವಾಸಿಗರ ರಕ್ಷಣೆಗಾಗಿ ಭಾರತೀಯ ನೌಕಾದಳ ಕಾರ್ಯಾಚರಣೆ ಪ್ರಾರಂಭಿಸಿದೆ.
ಅಂಡಮಾನ್ ದ್ವೀಪದಲ್ಲಿ ಚಂಡಮಾರುತದ ಅಬ್ಬರವಿದ್ದ ಕಾರಣ ನೌಕೆಗಳು ನಿನ್ನೆ ಪೋರ್ಟ್ಬ್ಲೇರ್ನಲ್ಲಿ ಇದ್ದವು. ಇದೀಗ ಚಂಡಮಾರುತದ ಅಬ್ಬರ ಕಡಿಮೆಯಾದ ಹಿನ್ನಲೆಯಲ್ಲಿ ನೌಕೆಗಳು ದ್ವೀಪದತ್ತ ಪ್ರಯಾಣ ಬೆಳೆಸಲಿವೆ. ನೌಕಾದಳದ ಬಿಟ್ರಾ, ಬಂಗಾರಂ, ಕುಂಭೀರ್ ಮತ್ತು ಎಲ್ಸಿಯು 38 ನೌಕೆಗಳು ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಮಂದಿ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.