ನವದೆಹಲಿ: ಅನಾಣ್ಯೀಕರಣದ ನಂತರ ರೂ.500 ಮತ್ತು 1000 ಮುಖಬೆಲೆಯ ನೋಟುಗಳ ಬಳಕೆ ಸ್ಥಗಿತಗೊಂಡಿದ್ದು, ಕಪ್ಪು ಹಣದ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ.
ಈ ಹೊಸ ನಿಯಮಗಳ ಮಸೂದೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ನ ಪರಿಶೀಳನೆಗೆ ಲೋಕಸಭೆಗೆ ಸಲ್ಲಿಸಿದ್ದಾರೆ.
ಈ ಹೊಸ ನಿಯಮದಂತೆ ರೂ.500 ಮತ್ತು 1000 ರೂ. ನೋಟುಗಳನ್ನು ಡಿಸೆಂಬರ್ 30 ಒಳಗೆ ಬ್ಯಾಂಕ್ಗಳಲ್ಲಿ ಠೇವಣಿ ಮಾಡಬಹುದು. 2.5 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿ ಮಾಡಿದಲ್ಲಿ ತೆರಿಗೆ ಇಲಾಖೆ ಪರಿಶೀಲನೆ ನಡೆಸಲಿದೆ.
ತಮ್ಮ ಖಾತೆಯಲ್ಲಿ ಕಪ್ಪು ಹಣ ಅಥವಾ ಈ ಹಿಂದೆ ತೆರಿಗೆ ಪಾವತಿಸದ ಠೇವಣಿ ಮಾಡಿರುವ ಬಗ್ಗೆ ಬಹಿರಂಗ ಪಡಿಸಿದಲ್ಲಿ ಅವರ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಲಾಗುವುದು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂವೈಕೆ) 2016, ಬಹಿರಂಗಪಡಿಸುವಿಕೆ ಯೋಜನೆ ಮುಂದಿನ 2017ರ ಎಪ್ರಿಲ್ ವರೆಗೆ ಜನರು ತಮ್ಮ ಹಣವನ್ನು ಠೇವಣಿ ಮಾಡ ಲು ಅನುಮತಿಸುತ್ತದೆ. ಒಟ್ಟು ಠೇವಣಿ ಮೇಲೆ ಶೇ. ೫೦ರಷ್ಟು ಪಾವತಿ, ಶೇ. 30 ತೆರಿಗೆ, ಶೇ.10ರಷ್ಟು ದಂಡ, ಶೇ.10ರಷ್ಟು ಗರಿಬ್ ಕಲ್ಯಾನ್ ಸೆಸ್ ಕಟ್ಟಬೇಕು.
ಈ ಮೂಲಕ ಠೇವಣಿಯ ಶೇ.50ರಷ್ಟು ಹಣ ತೆರಿಗೆ ರೂಪದಲ್ಲಿ ಪಾವತಿಯಾಗಲಿದ್ದು, ಶೇ.25ರಷ್ಟು ಹಣ ಠೇವಣಿದಾರನ ಖಾತೆಯಲ್ಲಿ ಲಭ್ಯವಿರಲಿದೆ.
ಈ ಉಳಿದಿರುವ ಶೇ.25ರಷ್ಟು ಹಣವನ್ನು ಸರ್ಕಾರ ಗರೀಬ್ ಕಲ್ಯಾಣ್ ಯೋಜನೆ ಅಡಿ ವಿವಿಧ ಕಾರ್ಯಗಳಿಗೆ ಬಳಸಲಿದೆ. ಖಾತೆದಾರ ಸರ್ಕಾರದ ಈ ಯೋಝನೆಯನ್ನು ತಿರಸ್ಕರಿಸಿದಲ್ಲಿ ಅವರ ಮೇಲೆ ಶೇ.85ರಷ್ಟು ತೆರಿಗೆ ಮತ್ತು ದಂಡ ವಿಧಲಾಗುವುದು ಎಂದು ತಿಳಿಸಿಲಾಗಿದೆ.
ಅಲ್ಲದೇ ಇದು ಇತರ ಕೆಲವು ನಿಯಮಗಳನ್ನೂ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.