ನವದೆಹಲಿ: ನೋಟು ನಿಷೇಧದ ಚರ್ಚೆಗಳ ಮಧ್ಯೆ ಆರ್ಥಿಕತೆಯಲ್ಲಿ ವಾಸ್ತವಾಗಿ ಬಳಸಲಾಗುತ್ತಿರುವ ಹಣದ ಬಳಕೆಯ ಬದಲಾಗಿ ಡಿಜಿಟಲ್ ನಗದು ಬಳಕೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ.
ಲೋಕಸಭೆಯಲ್ಲಿ ಡಿಜಿಟಲ್ ವ್ಯವಸ್ಥೆಯ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ನಗದು ಹಣವದ ಬಳಕೆಯನ್ನು ದಿಜಿಟಲ್ ನಗದನ್ನಾಗಿ ಬದಲಿಸಲು ಕೇಂದ್ರ ಸರ್ಕಾರ ಬಯಸಿದೆ. ನಗದು ಹಣದ ಬಳಕೆ ಕಡಿಮೆಯಾಗಬೇಕು. ವ್ಯಾಪಾರ ಮತ್ತು ಆರ್ಥಿಕತೆಯಲ್ಲಿ ಏಳಿಗೆಯಾಗಬೇಕು ಎಂದು ಅವರು ಹೇಳಿದ್ದಾರೆ.
ಸುಮಾರು ೮೦ ಕೋಟಿ ಡೆಬಿಟ್ ಕಾರ್ಡ್ಗಳಲ್ಲಿ ೪೦ ಕೋಟಿ ಡೆಬಿಟ್ ಕಾರ್ಡ್ಗಳು ಎಟಿಎಂಗಳಲ್ಲಿ ಸಕ್ರಿಯವಾಗಿ ಬಳಕೆಯಾಗುತ್ತಿದೆ. ಇಲೆಕ್ಟ್ರಾನಿಕ್ ವ್ಯಾಲೆಟ್ ಮತ್ತು ನಿಧಿಗಳ ಡಿಜಿಟಲ್ ವರ್ಗಾವಣೆ ತಂತ್ರಜ್ಞಾನದ ಬಳಕೆಗೆ ಸರ್ಕಾರ ಪ್ರೋತ್ಸಾಹಿಸುತ್ತಿದ್ದು, ರಾಜ್ಯ ಸರ್ಕಾರಗಳು ಇದಕ್ಕೆ ಕೊಡುಗೆ ನೀಡುವಂತೆ ಕೇಳಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ನಗದು ರಹಿತ ಸಮಾಜಕ್ಕಾಗಿ ಜನರಲ್ಲಿ ಮೂಲಸಕರ್ಯ ವಿಸ್ತರಣೆ, ಸ್ವೀಕೃತಿ, ಮತ್ತು ಜಾಗೃತಿ ಅಭಿಯಾನ ನಡೆಸಲು ಶಿಕ್ಷಣ ಠೇವಣಿ ಮತ್ತು ಜಾಗೃತಿ ನಿಧಿಯ ಅಡಿಯಲ್ಲಿ ನಿಧಿ ಮೀಸಲಿಡುವುದು ಅಗತ್ಯ ಎಂದು ಹೇಳಿದ್ದಾರೆ.
ನಗದು ರಹಿತ ಸಮಾಜ ಎಂದರೆ ಕಡಿಮೆ ಹೂಡಿಕೆಯಲ್ಲಿ ನಗದು ನಿರ್ವಹಣೆಗೆ, ಪಾವತಿಯಲ್ಲಿ ಪಾರದರ್ಶಕತೆ ಮತ್ತು ನಕಲಿ ಹಣದ ಪರಿಶೀಲನೆ ಎಂದು ಜೇಟ್ಲಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.