ನವದೆಹಲಿ : ಸಿಬಿಎಸ್ಸಿ ಮಾನ್ಯತೆ ಹೊಂದಿರುವ ಶಾಲೆಗಳ ಎರಡನೇ ತರಗತಿಯವರೆಗಿನ ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗಗಳನ್ನು ತೆಗದುಕೊಂಡು ಹೋಗುವಂತಿಲ್ಲ ಎಂದು ಸಿಬಿಎಸ್ಸಿ ಬೋರ್ಡ್ ನಿರ್ದೇಶಿಸಿದೆ ಮತ್ತು 1 ರಿಂದ 8 ನೇ ತರಗತಿಯ ಪಠ್ಯವನ್ನು ಪರಿಷ್ಕರಿಸಿ ಪುಸ್ತಕಗಳ ಸಂಖ್ಯೆಯನ್ನು ನಿರ್ಬಂಧಿಸಬೇಕು ಎಂದು ಮಾನವ ಸಂಪನ್ಮೂಲ ರಾಜ್ಯ ಸಚಿವ ಉಪೇಂದ್ರ ಕುಶ್ವಾಹಾ ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ.
ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನ್ ರಿಸರ್ಚ್ ಆಂಡ್ ಟ್ರೇನಿಂಗ್ (ಎನ್ಸಿಆರ್ಟಿ) ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್(ಸಿಬಿಎಸ್ಸಿ)ಗಳು ಪಠ್ಯಕ್ರಮದ ಭಾರ ಹಾಗೂ ಸ್ಕೂಲ್ ಬ್ಯಾಗಳನ್ನು ಹಗುರ ಮಾಡುವ ಬಗ್ಗೆ ಕ್ರಮ ಕೈಗೂಂಡಿವೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ಪ್ರಕಟಣೆಯ ಪ್ರಕಾರ ಸೆಪ್ಟಂಬರ್ 12, 2016 ರಿಂದ ಸ್ಕೂಲ್ ಬ್ಯಾಗ್ನ ಭಾರವನ್ನು ನಿಯಂತ್ರಣದಲ್ಲಿಡಲು ಎಲ್ಲಾ ಸಂಭಾವ್ಯ ಕ್ರಮಗಳನ್ನು ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಎನ್ಸಿಇಆರ್ಟಿ ಬಾಲ್ಯ ಶಿಕ್ಷಣಕ್ಕೆ ಯಾವುದೇ ಪಠ್ಯಗಳನ್ನು ಶಿಫಾರಸು ಮಾಡಿಲ್ಲ ಮತ್ತು 1, 2 ನೇ ತರಗತಿಯವರಿಗೆ ಕೇವಲ ಎರಡು ಪುಸ್ತಕಗಳು ಹಾಗೂ 3 ರಿಂದ 5 ನೇ ತರಗತಿಯವರೆಗೆ ಮೂರು ಪುಸ್ತಕಗಳನ್ನು ಶಿಫಾರಸು ಮಾಡಿದೆ ಎನ್ನಲಾಗಿದೆ.
ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿಕೊಂಡು ಎನ್ಸಿಇಆರ್ಟಿ ಸಹಯೋಗದೊಂದಿಗೆ ವೆಬ್ಸೈಟ್ನಲ್ಲಿ ಎಲ್ಲ ಪಠ್ಯಪುಸ್ತಕಗಳನ್ನು ಹಾಗೂ ಇತರ ಭೋದನಾ ಮತ್ತು ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.