ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧದ ಬಾಂಬ್ ಶೆಲ್ 4 ಅಸುರರ ಮೇಲೆ ಏಕಕಾಲಕ್ಕೆ ನಡೆಸಿದ ದಾಳಿಯಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ದೇಶವನ್ನು ಅಸ್ಥಿರಗೊಳಿಸಲು ಕೋಟ್ಯಾಂತರ ರೂಪಾಯಿ ಮೊತ್ತದ ನಕಲಿ ನೋಟುಗಳನ್ನು ಸಾಗಿಸಲಾಗುತ್ತಿತ್ತು. ಆದರೆ ಮೋದಿಯವರ ನೋಟು ನಿಷೇಧದ ಕ್ರಮವು ಬಾಂಬ್ ಶೆಲ್ನಂತೆ ಏಕಕಾಲಕ್ಕೆ ಕಪ್ಪು ಹಣ, ಅಕ್ರಮ ಆಸ್ತಿ, ಡ್ರಗ್ಸ್ ಜಾಲ, ಭಯೋತ್ಪಾದಕರ ಆರ್ಥಿಕತೆಗೆ ಮೂಲವಾಗಿದ್ದ ಆರ್ಥಿಕತೆಗೆ ಎಂಬ 4 ಅಸುರರ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಶತ್ರು ರಾಷ್ಟ್ರದಿಂದ ಸಾವಿರಾರು ಕೋಟಿ ಮೊತ್ತದ ನಕಲಿ ನೋಟುಗಳನ್ನು ಭಾರತದೊಳಗೆ ಚಲಾವಣೆ ಮಾಡಿ, ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿತ್ತು. ಬಾಂಗ್ಲಾದೇಶ, ನೇಪಾಳ, ಕಾಶ್ಮೀರದ ಗಡಿಗಳನ್ನು ಬಳಸಿಕೊಂಡು ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲಾಗುತ್ತಿತ್ತು. ಭಾರತವನ್ನು ನಾಶ ಮಾಡಲು ನಿಯೋಜಿಸಿದವರು ಕೇವಲ ಕಾಶ್ಮೀರದಲ್ಲಿ ಮಾತ್ರ ದಾಳಿಗಳನ್ನು ಮಾಡುತ್ತಿರಲಿಲ್ಲ, ಬದಲಿಗೆ ನಮ್ಮ ದೇಶದ ಆರ್ಥಿಕತೆಯ ಮೇಲೂ ದಾಳಿ ನಡೆಸುತ್ತಿದ್ದರು.
ಕಪ್ಪು ಹಣ, ಭಯೋತ್ಪಾದಕರ ಆರ್ಥಿಕತೆ, ಅಕ್ರಮ ಆಸ್ತಿ, ಸಾಗಾಟ, ಡ್ರಗ್ಸ್ ಜಾಲ ಇಂತಹ ನಾಲ್ಕು ದುಷ್ಟ ಶಕ್ತಿಗಳ ಮೇಲೆ ಏಕಕಕಾಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧದ ಅಸ್ತ್ರವನ್ನು ಬಳಸಿ ದಾಳಿ ನಡೆಸಿದ್ದಾರೆ ಎಂದು ಮೋದಿಯವರ ನಡೆಯನ್ನು ಪ್ರಶಂಸಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.