ನವದೆಹಲಿ: ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಬ್ಯಾಂಕ್ಗಳು ಮತ್ತು ಎಟಿಎಂಗಳಿಗೆ ಹಣ ಸಾಗಿಸಲು ಮತ್ತು ಜನರನ್ನು ನಿಯಂತ್ರಿಸಲು ಸೈನಿಕರ ಸಹಾಯ ಪಡೆದಿರುವುದಾಗಿ ಸರ್ಕಾರ ಇತ್ತೀಚೆಗೆ ತಿಳಿಸಿತ್ತು.
ಈ ಕುರಿತಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿ ಮೇಜರ್ ಗೌರವ್ ಆರ್ಯ ಅವರು ಬರೆದಿರುವ ಬಹಿರಂಗ ಪತ್ರ ಈಗ ವೃರಲ್ ಆಗಿದೆ.
ನಮ್ಮನ್ನು ನಾವು ಪ್ರಸ್ತುತಪಡಿಸಲು ನಿಜಲಕ್ಕೂ ಸೈನಿಕರನ್ನು ಕೀಳು ಮಾಡುವ ಅಗತ್ಯವಿದೆಯೇ ಎಂದು ಅವರು ತಮ್ಮ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ವಿವಿಧ ಸಾಮಾಜಿಕ ಮಾಧ್ಯಮಗಳ ಹೋರಾಟಗಾರರು ಬ್ಯಾಂಕ್ಗಗಳು ಮತ್ತು ಎಟಿಎಂಗಳಲ್ಲಿ ಸಾಲಿನಲ್ಲಿ ನಿಲ್ಲುವುದು ಗಡಿ ನಿಯಂತ್ರಣ ರೇಖೆಯಲ್ಲಿ ಸೈನಿಕರು ನಿಂತಷ್ಟೇ ಕಷ್ಟ ಎಂದು ಭಾವಿಸುತ್ತಾರೆ. ಒಂದು ವೇಳೆ ಇದು ನಿಜ ಎಂದು ಭಾವಿಸಿದಲ್ಲಿ ಹಣ ಬದಲಾವಣೆಗೆ ಜನರನ್ನು ನಿಯಂತ್ರಿಸಿ ವಿನಿಮಯ ಮಾಡಲು ಜನರು ಒಂದು ದಿನದ ಮಟ್ಟಿಗಾದರೂ ವಿವಿಧ ಪಾತ್ರಗಳನ್ನು ನಿರ್ವಹಿಸಬಾರದೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಕೆಲವು ವಾರಗಳ ಹಿಂದೆ ಗಡಿ ನಿಯಂತ್ರಣ ರೇಖೆಯಲ್ಲಿ ಹಿಂಚಾರ ನಡೆದು ಉತ್ತುಂಗಕ್ಕೆ ತಲುಪಿದ್ದಾಗ (ಈಗಲೂ ಮುಂದುವರೆದಿದೆ) ಜನರು ಪಾಕಿಸ್ಥಾನದ ವಿರುದ್ಧ ಯುದ್ಧ ಮಾಡಬೇಕಾಗಿ ಬಯಸಿದ್ದರು. ಅವರು ಯಾರೂ ಸೈನಿಕರಲ್ಲ. ನನಗೆ ಅವರ ಭಾವನೆಗಳು ಅರ್ಥವಾಯಿತು.
ಯುದ್ಧ ಬಯಸದವರಿಗೆ ಯುದ್ಧ ಎಂಬುದು ಸಂಕಷ್ಟದ ವಿಷಯ. ಮತ್ತು ನಾವು ನಾವು ಯಾವುದನ್ನು ಲಘುವಾಗಿ ತೆಗೆದುಕೊಳ್ಳುತ್ತೇವೋ ಅದು ದಿಢೀರ್ ಅಸ್ತವ್ಯಸ್ತಗೊಳಿಸುವಂತಹದ್ದು. ನಿಮ್ಮ ನಗರದಲ್ಲಿ ಶತ್ರುವಿನ ಯುದ್ಧ ವಿಮಾನ ಎಫ್-16ಎಸ್ ಹಾರಾಡುವುದು ಮೋಜಿನ ವಿಚಾರವಲ್ಲ. ‘ನಾವು ಯುದ್ದವನ್ನು ಬಯಸುತ್ತೇವೆ’ ಎಂದು ಅವರು ಸಾಮರಸ್ಯದಿಂದ ಹೇಳಿದರು. ‘ನಾವು ನಮ್ಮ ದೇಶಕ್ಕಾಗಿ ತ್ಯಾಗ ಮಾಡುತ್ತೇವೆ’ ಎಂದು ಸೈನಿಕರು ಧೈರ್ಯದಿಂದ ಹೇಳಿದರು ಎಂದು ಆರ್ಯ ಬರೆದಿದ್ಧಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.