ನವದೆಹಲಿ : ಬ್ಯಾಂಕ್ಗಳಲ್ಲಿ ಹಳೆ ನೋಟು ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಇಂಕ್ ಹಾಕುವುದನ್ನು ನಿಲ್ಲಿಸಿ. ಈ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಚುನಾವಣಾ ಆಯೋಗ ಸರ್ಕಾರಕ್ಕೆ ಹೇಳಿದೆ.
ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಚುನಾವಣಾ ಸಂದರ್ಭದಲ್ಲಿ ಬಳಸುವ ಇಂಕ್ನ್ನು ಹಾಕಬೇಕೆಂಬ ನಿಯಮವನ್ನು ಕಳೆದೆರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.
ಇದೀಗ ಚುನಾವಣಾ ಆಯೋಗವು ಈ ನಿಯಮದ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸರ್ಕಾರವನ್ನು ಕೇಳಿಕೊಂಡಿದೆ. ಇದಕ್ಕೆ ಕಾರಣ, ಹಲವು ರಾಜ್ಯಗಳಲ್ಲಿ ಸದ್ಯದಲ್ಲಿ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ನೋಟು ವಿನಿಮಯ ಸಂದರ್ಭದಲ್ಲಿ ಬೆರಳಿನ ಮೇಲೆ ಹಾಕಲಾಗುವ ಇಂಕ್ನಿಂದಾಗಿ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂಕ್ನ್ನು ಬಳಸದಿರುವುದು ಒಳ್ಳೆಯದು. ಈ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಹಣಕಾಸು ಇಲಾಖೆಗೆ ಚುನಾವಣಾ ಆಯೋಗವು ಸಲಹೆ ನೀಡಿದೆ.
ಆದರೆ ಸರ್ಕಾರದ ನಿಯಮದ ಪ್ರಕಾರ ನೋಟು ವಿನಿಮಯ ಸಂದರ್ಭದಲ್ಲಿ ಜನರ ಬಲಗೈನ ಬೆರಳಿಗೆ ಇಂಕ್ ಹಾಕಲಾಗುತ್ತಿದೆ. ಚುನಾವಣೆ ವೇಳೆ ಮತದಾರರ ಎಡಗೈ ಬೆರಳಿಗೆ ಮೇಲೆ ಇಂಕ್ ಹಾಕಲಾಗುತ್ತದೆ. ಹೀಗಾಗಿ ಇದರಿಂದ ಸಮಸ್ಯೆ ಏನೂ ಆಗುವುದಿಲ್ಲ ಎಂಬ ಸಮರ್ಥನೆ ನೀಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.