ಹರಿಯಾಣ : ಹರಿಯಾಣದ ಪಲ್ವಾಲ್ ಜಿಲ್ಲೆಯಲ್ಲಿರುವ ಬಡ ಕುಟುಂಬಗಳಿಗೆ ಜಿಲ್ಲಾಡಳಿತವು ಎರಡು ಹೊತ್ತಿನ ಊಟವನ್ನು ಉಚಿತವಾಗಿ ನೀಡಲಿದೆ.
2016 ರ ನವೆಂಬರ್ 1 ರಂದು ಹರಿಯಾಣದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಜಾರಿಮಾಡಲಾಯಿತು. ಇಂದಿನಿಂದ ಜಿಲ್ಲೆಯಲ್ಲಿರುವ ಯಾವುದೇ ಕುಟುಂಬವೂ ಹಸಿವಿನಿಂದ ನಿದ್ರಿಸುವಂತಹ ಪರಿಸ್ಥಿತಿ ಬರಬಾರದು ಎಂಬ ಹಿನ್ನಲೆಯಲ್ಲಿ ಎರಡು ಹೊತ್ತಿನ ಉಟವನ್ನು ಬಡ ಕುಟುಂಬಗಳಿಗೆ ಉಚಿತವಾಗಿ ನೀಡುವ ಯೋಜನೆಯನ್ನು ಘೋಷಿಸಿದೆ.
ಈ ಯೋಜನೆಯ ಅಡಿಯಲ್ಲಿ ಆದಾಯದ ಯಾವುದೇ ಮೂಲಗಳನ್ನು ಹೊಂದಿರದ ಹಾಗೂ ಕನಿಷ್ಠ ಎರಡು ಹೊತ್ತಿನ ಆಹಾರ ದೊರೆಯದ ಬಡಜನರಿಗೆ ಉಚಿತ ಆಹಾರ ಸೇವೆಯನ್ನು ಒದಗಿಸಲಾಗುವುದು. ಪಲ್ವಾಲ್ ಜಿಲ್ಲೆಯ ಬಡ ಜನರ ಒಳಿತಿಗಾಗಿ ಜಿಲ್ಲಾಡಳಿತವು ಈ ಯೋಜನೆಯನ್ನು ಜಾರಿಮಾಡಿದೆ. ಬಡ ಜನರ ಹಿತಾಸಕ್ತಿಗಾಗಿ ಇಲ್ಲಿಯ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹಲವು ಯೋಜನೆಗಳನ್ನು ಪ್ರಾರಂಭಿಸಿದ್ದಾರೆ.
ರೆಡ್ಕ್ರಾಸ್ ಸಂಸ್ಥೆಯ ಮುಖ್ಯಸ್ಥರು ಈ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಎರಡು ಹೊತ್ತಿನ ಆಹಾರದ ಕೂರತೆ ಇರುವವರು ಈ ಯೋಜನೆಯ ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು. ಪಲ್ವಾಲ್ ಜಿಲ್ಲಾಡಳಿತವು ಬಡಜನರಿಗೆ ಕೂಪನ್ ನೀಡುತ್ತಿದ್ದು ಅಂತಹವರಿಗೆ ಉಚಿತ ಆಹಾರವನ್ನು ವಿತರಿಸಲಾಗುವುದು ಎಂದು ಹೇಳಿದೆ.
ಜಿಲ್ಲೆಯ ಮುಖ್ಯ ಕಾರ್ಯಾಲಯದಲ್ಲಿ ನವೆಂಬರ್ 1 ರಿಂದ ನವೆಂಬರ್ 7 ರವರೆಗೆ ಈ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳು ತಮ್ಮ ಹೆಸರನ್ನು ದಾಖಲಿಸಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.