ನವದೆಹಲಿ: ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಬ್ಯಾಂಕಗಳಲ್ಲಿ ಹಣ ಬದಲಾಯಿಸಲು ಸಾಲುಗಟ್ಟಿ ನಿಲ್ಲುತ್ತಿದ್ದು, ನೋಟು ಬದಲಾವಣೆ ಸಂದರ್ಭ ಐಡಿ ಕಾರ್ಡ್ನ ನಕಲು ಪ್ರತಿಗಳನ್ನು ಪಡೆಯದಂತೆ ಆರ್ಬಿಐ ಇತರ ಬ್ಯಾಂಕ್ಗಳಿಗೆ ಸೂಚಿಸಿವೆ.
ಆರ್ಬಿಐ ಮಾರ್ಗಸೂಚಿ ಪ್ರಕಾರ ಜನರು ತಮ್ಮ ಮಾನ್ಯ ಐಡಿ ಪುರಾವೆ ನೀಡಬೇಕು. ಅವರು ಅದರ ನಕಲು ಪ್ರತಿ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.
ಆದರೆ ಕೆಲವು ಬ್ಯಾಂಕ್ಗಳು ಹಣ ಬದಲಿಸಿಕೊಳ್ಳಲು ಜನರಿಂದ ನಕಲು ಪ್ರತಿ ಕೇಳುತ್ತಿದ್ದು, ಇದರಿಂದ ಜನರು ಹೆಚ್ಚಿನ ಕಾಲ ಸರತಿ ಸಾಲಿನಲ್ಲಿ ನಿಲ್ಲುವ ಸಮಸ್ಯೆ ಎದುರಾಗಿದೆ.
ಎಸ್ಬಿಐ ಸೇರಿದಂತೆ ಅನೇಕ ಬ್ಯಾಂಕ್ಗಳು ಪೋಟೊಕಾಪಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಕೆಲವು ಬ್ಯಾಂಕ್ಗಳು ಮಾನ್ಯ ಐಡಿ ಕಾರ್ಡ್ನೊಂದಿಗೆ ಬಂದ ಜನರಿಂದ ಅದರ ನಕಲು ಪ್ರತಿ ತರುವಂತೆ ಹೇಳಿ ಕಳುಹಿಸಿದ್ದಾರೆ.
ಕೆಲವು ಬ್ಯಾಂಕ್ಗಳು ಪ್ರತಿಗಳನ್ನು ಪಡೆಯುತ್ತಿಲ್ಲ. ಇನ್ನಿತರ ಬ್ಯಾಂಕ್ಗಳು ಖಾತೆ ಹೊಂದಿದ ಗ್ರಾಹಕರ ಕೆವೈಸಿಯ ಮೂಲಕ ಮಾಹಿತಿ ಪಡೆಯುತ್ತಿವೆ. ಬ್ಯಾಂಕ್ನಲ್ಲಿ ಖಾತೆ ಹೊಂದದ ಗ್ರಾಹಕರು ಹಣ ಬದಲಿಸಿಕೊಳ್ಳಲು ಬಂದಾಗ ಅವರಿಂದ ಪೋಟೊ ಮತ್ತು ಅದರ ಮೇಲೆ ಅವರ ಹೆಸರು, ಸಹಿ, ದಿನಾಂಕ ಬರೆಸಿಕೊಳ್ಳಲಾಗುತ್ತದೆ ಎಂದು ಲಕ್ಷ್ಮಿ ವಿಲಾಸ್ ಬ್ಯಾಂಕ್ನ ಸಿಒಒ ಎ. ವಿದ್ಯಾಸಾಗರ್ ತಿಳಿಸದ್ದಾರೆ.
ಕೇಂದ್ರ ಸರ್ಕಾರ ನವೆಂಬರ್ 8 ರಂದು ನೋಟು ನಿಷೇಧ ಆದೇಶ ಹೊರಡಿಸಿದ್ದು, ಆರ್ಬಿಐ ಆದೇಶದಂತೆ ಇನ್ನು ಮುಂದೆ ಬ್ಯಾಂಕಿನಿಂದ ಹಣ ಬದಲಿಸಿಕೊಳ್ಳಲು ರೆಕ್ಯೂಸಿಶನ್ ಸ್ಲಿಪ್ ಮತ್ತು ಅಸಲಿ ಐಡಿ ಪ್ರೂಫ್ ನೀಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.