ನವದೆಹಲಿ: ಇಸ್ರೇಲ್ ಅಧ್ಯಕ್ಷ ರಿವೆನ್ ರಿವ್ಲಿನ್ ೮ ದಿನಗಳ ಭಾರತ ಭೇಟಿಯ ಹಿನ್ನೆಲೆಯಲ್ಲಿ ನಿನ್ನೆ ಮುಂಬೈಗೆ ಆಗಮಿಸಿದ್ದು, ಇಂದು ಪ್ರಧಾನಿ ಮೋದಿಯವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಕೃಷಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಭಾರತ ಮತ್ತು ಇಸ್ರೇಲ್ ದೃಢ ಸಂಬಂಧಗಳನ್ನು ಹೊಂದಿದೆ. ಅಲ್ಲದೇ ಆರ್ಥಿಕ ಮತ್ತು ವಾಣಿಜ್ಯ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಉತ್ತಮ ಸಂಬಂಧ ಹೊಂದಿದೆ.
ನವೆಂಬಡಿಜಿಜಿ೧೪-೨೧ರವರೆಗೆ ಭಾರತದಲ್ಲಿರುವ ರಿವ್ಲಿನ್ರವರು ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ ಅವರಿಂದ ಆತಿಥ್ಯ ಸ್ವೀಕರಿಸಲಿದ್ದಾರೆ. ನಂತರ ರಿವ್ಲಿನ್ರವರು ಉಪರಾಷ್ಟ್ರಪತಿ ಮಹಮ್ಮದ್ ಹಮೀದ್ ಅನ್ಸಾರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ಅಲ್ಲಿಂದ ರಾಜ್ಘಾಟ್ನಲ್ಲಿರುವ ಗಾಂಧೀಜಿ ಸ್ಮರಣಾರ್ಹತ ಗಾಂಧಿಭವನಕ್ಕೆ ತೆರಳಿದ್ದಾರೆ
ಪ್ರಧಾನಿ ಮೋದಿಯವರನ್ನು ಹೈದರಾಬಾದ್ ಹೌಸ್ನಲ್ಲಿ 11:30ಕ್ಕೆ ಭೇಟಿಯಾಗಲಿರುವ ರಿವ್ಲಿನ್, ಕೃಷಿ ಸಹಕಾರ ಒಪ್ಪಂದ ಸೇರಿದಂತೆ ವಿವಧ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.
4 ಗಂಟಗೆ ತಾಜ್ ಹೋಟೆಲ್ನಲ್ಲಿ ಉಪರಾಷ್ಟ್ರಪತಿ ಮಹ್ಮದ್ ಹಮೀದ್ ಅನ್ಸಾರಿಯವರನ್ನು ಭೇಟಿ ಮಾಡಿ ಅಲ್ಲಿಂದ 7:30 ಕ್ಕೆ ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದು, 8 ಗಂಟೆಗೆ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಲಿದ್ದಾರೆ.
ಬುಧವಾರ ಬೆಳಿಗ್ಗೆ 11 ಗಂಟೆಗೆ ತಾಜ್ ಮಹಲ್ ವೀಕ್ಷಿಸಿ ಅಲ್ಲಿಂದ ಉತ್ತರಪ್ರದೇಶದ ಸಿಕಂದ್ರಾದಲ್ಲಿಯ ಉತ್ತರ ಪ್ರದೇಶ ಜಲ ನಿಗಮ ನೀರು ಸಂಸ್ಕರಣ ಘಟಕಕ್ಕೆ ಭೇಟಿ ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅವರು ಉಭಯ ದೇಶಗಳ ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ ಕರ್ನಲ್ನಲ್ಲಿರುವ ಕೃಷಿಯ ‘ಸೆಂಟರ್ ಆಫ್ ಎಕ್ಸ್ಲೆನ್ಸ್’ ಗೆ ಭೇಟಿ ನೀಡಲಿದ್ದಾರೆ ಮತ್ತು ಗುರುವಾರ ನಡೆಯಲಿರುವ ಅಗ್ರೋ ಟೆಕ್-೨೦೧೬ನಲ್ಲಿ ಪಾಲ್ಗೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.